Friday, July 31, 2026

BDA Apartments

Home Front Page ದಸರಾ ಆನೆ ಬಲರಾಮನಿಗೆ  ಗುಂಡು ಹಾರಿಸಿದ್ಧ ಆರೋಪಿಯ ಬಂಧನ.

ದಸರಾ ಆನೆ ಬಲರಾಮನಿಗೆ  ಗುಂಡು ಹಾರಿಸಿದ್ಧ ಆರೋಪಿಯ ಬಂಧನ.

ಮೈಸೂರು ,ಡಿಸೆಂಬರ್,17,2022(www.justkannada.in): ದಸರಾ ಆನೆ ಬಲರಾಮನಿಗೆ ಗುಂಡು ಹಾರಿಸಿದ್ಧ ಜಮೀನು ಮಾಲೀಕನನ್ನ ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಸುರೇಶ್ ಎಂಬ ಆರೋಪಿಯನ್ನ ಬಂಧಿಸಲಾಗಿದ್ದು ಸಿಂಗಲ್ ಬ್ಯಾರಲ್ ಬಂದೂಕು, ಕಾರ್ಟ್ರಿಜ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಸುರೇಶ್ ಗೆ  14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದ ಆನೆ, 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಗುರುವಾರ ರಾತ್ರಿ ಶಿಬಿರದ ಸಮೀಪದ ಜಮೀನಿಗೆ ಹೋಗಿದ್ದ. ಈ ವೇಳೆ ಸಿಟ್ಟಿಗೆದ್ದ ಮಾಲೀಕ ಸುರೇಶ್ ಬಲರಾಮನ ಮೇಲೆ ಗುಂಡು ಹಾರಿಸಿದ್ದ. ಆನೆಯ ತೊಡೆ ಬಳಿ ಗುಂಡು ಹೊಕ್ಕಿತ್ತು.

ಗಾಯಗೊಂಡಿದ್ದ ಬಲರಾಮನಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್‌ ಚಿಕಿತ್ಸೆ‌ ನೀಡಿದ್ದು, ಸದ್ಯ ಬಲರಾಮ ಚೇತರಿಸಿಕೊಂಡಿದ್ದಾನೆ.

Key words: Accused – arrested-fire-mysore-Dasara elephant -Balarama