ರಾಜ್ಯದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ: ಸರ್ಕಾರದ ವಿರುದ್ದ ಸಭಾಪತಿ ಹೊರಟ್ಟಿ ಅಸಮಾಧಾನ

ಹಾವೇರಿ,ಫೆಬ್ರವರಿ,17,2026 (www.justkannada.in):  ರಾಜ್ಯದಲ್ಲಿ ಅತಿಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಶಿಕ್ಷಕರ ನೇಮಕಾತಿ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಸವರಾಜ ಹೊರಟ್ಟಿ, ರಾಜ್ಯದಲ್ಲಿ 29 ಸಾವಿರ ಶಿಕ್ಷಕ ಹುದ್ದೆಗಳು ಖಾಲಿಯಿವೆ. ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸಭೆ ಕರೆಯುತ್ತೇನೆ. ಮುಂದಿನ ಅಧಿವೇಶನ ಸಂದರ್ಭದಲ್ಲಿ ಸಭೆ ಕರೆಯಬೇಕು. ತರಗತಿಗೊಬ್ಬ ಶಿಕ್ಷಕರನ್ನ ಕೊಡುವ ಕೆಲಸ ಆಗಬೇಕು ಎಂದರು.

ಶಿಕ್ಷ ಇಲಾಖೆ ಸಚಿವರಿಗೆ ಕೇಳುತ್ತೇನೆ.  ಶಿಕ್ಷಕರ ನೇಮಕ ಮಾಡದೇ  ಹೇಗೆ ಎಸ್ ಎಸ್ ಎಲ್ ಸಿ ರಿಸಲ್ಟ್ ಕೇಳುತ್ತೀರಿ ಎಸ್ ಎಸ್ ಎಲ್ ಸಿಯಲ್ಲಿ ಹೇಗೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡುತ್ತೀರಿ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಶಿಕ್ಷಕರ ನೇಮಕಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುವೆ. ಸರ್ಕಾರ ೆಲ್ಲಾ ನ್ಯೂನ್ಯತೆ ಸರಿಪಡಿಸಲಿ ಎಮ್ಮೆಯನ್ನು ನೀರಿನಲ್ಲಿ ಮಲಗಿಸಿ ಬೆಲೆ ಕಟ್ಟುವುದು ಬೇಡ ಎಂದು ಸಭಾಪತಿ ಹೊರಟ್ಟಿ ಕಿಡಿಕಾರಿದರು.

Key words:  Teacher posts,  vacant, Basavaraj horatti, government