ಬಾಗಲಕೋಟೆ,ಸೆಪ್ಟಂಬರ್,3,2026 (www.justkannada.in): ಶ್ರೀರಾಮುಲು ಒಬ್ಬ ಜೋಕರ್, ಇವರಿಂದ ರಾಹುಲ್ ಗಾಂಧಿ ಕಲಿಯಬೇಕಿಲ್ಲ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಾದಯಾತ್ರೆ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್, ಇದು ಬಿಜೆಪಿಯ ಅಸ್ತಿತ್ವದ ಪಾದಯಾತ್ರೆ. ಸದನದಲ್ಲಿ ಯಾವ ವಿಷಯವನ್ನೇ ಸಮರ್ಪಕವಾಗಿ ಮಂಡಿಸಲಿಲ್ಲ ಬಿಜೆಪಿಯವರು ಸದನ ಸಮಯ ಹಾಳು ಮಾಡುದರು.
ಬಿವೈ ವಿಜಯೇಂದ್ರ ಕಥೆ ಬೇಡ . ಶ್ರೀರಾಮುಲು ಒಬ್ಬ ಜೋಕರ್. ಆ ಪಾರ್ಟಿಯಲ್ಲೇ ಶ್ರೀರಾಮುಲುರನ್ನ ಜೋಕರ್ ಮಾಡಿದ್ದಾರೆ. ಜೋಕರ್ ಆಗಿ ಟೀಶರ್ಟ್ ಹಾಕಿಕೊಂಡು ಓಡಾಡಿದ್ದಾರೆ. ಶ್ರೀರಾಮುಲುರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.
Key words: Sriramulu , joker, Minister, Vijayananda Kashpanavar







