ಸಿದ್ದರಾಮಯ್ಯ – ಎಚ್.ವಿಶ್ವನಾಥ್ ಮತ್ತೆ ಒಂದಾಗುತ್ತಿರುವ ಕುರಿತು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿ!

ಬೆಂಗಳೂರು, ಡಿಸೆಂಬರ್ 11, 2022 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ಮತ್ತೆ ಒಂದಾಗುತ್ತಿರುವ ಕುರಿತು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್, ವಿಶ್ವನಾಥ್-ಸಿದ್ದರಾಮಯ್ಯ ಬಗ್ಗೆ ನಾನು ಪ್ರತಿಕ್ರಿಯೆ ಕೊಡದೇ ಇರೋದೇ ಒಳ್ಳೆಯದು. ಅವ್ರಿಬ್ಬರು ಏನೇನು ಮಾತ‌ನಾಡಿದ್ದಾರೆ ಎಂದು ಅವರೇ ನೆನಪಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಸಿದ್ದು ಬಗ್ಗೆ ವಿಶ್ವನಾಥ್ ಎಂತೆಂಥಾ ಕಟು ಶಬ್ದಗಳನ್ನ ಬಳಸಿದ್ದರು. ಇನ್ನು ವಿಶ್ವನಾಥ್ ಬಗ್ಗೆ ಸಿದ್ದು ಪಾದರಕ್ಷೆ ಕಳಚಿ ತೋರಿಸಿದ್ದರು. ಇದೀಗ ಮತ್ತೆ ಇಬ್ಬರು ಒಂದಾಗುತ್ತಾರೆ ಎಂದರೆ ಏನು ಹೇಳೋಣ ಎಂದು ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.