ನವದೆಹಲಿ,ಆಗಸ್ಟ್,12,2026 (www.justkannada.in): ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳುನಾಡು ಒತ್ತಡ ಹಾಕುವ ಪ್ರಯತ್ನ ಮಾಡಿತ್ತು ಆದರೆ ಕರ್ನಾಟಕ ಸರ್ಕಾರ ಸರಿಯಾಗಿ ಸಿದ್ದತೆ ನಡೆಸಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿಕೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ರಾಜ್ಯಕ್ಕೆ ಅನಿವಾರ್ಯ ಮೇ ತಿಂಗಳಲ್ಲಿ ಸಿಡಬ್ಲ್ಯುಎಂಎ ಮೇಲೆ ತಮಿಳುನಾಡು ಒತ್ತಡ ಹಾಕಿತ್ತು. ರಾಜ್ಯ ಸರ್ಕಾರ ಯಾವುದೇ ತಯಾರಿ ಮಾಡಿಲ್ಲ ಈ ವರ್ಷ ಮಳೆ ಕೊರತೆ ಇರುವ ಬಗ್ಗೆ ಮಾಹಿತಿ ಇತ್ತು.
ಈ ವರ್ಷ ಮಳೆ ಕೊರತೆಯಾಗಲಿದೆ ಎನ್ನುವ ಮಾಹಿತಿ ಮೊದಲೇ ಇತ್ತು. ಮೋದಿ ಅವರು ಹಲವು ಬಾರಿ ಈ ವಿಷಯ ಪ್ರಸ್ತಾಪಿಸಿದ್ದರು ಅದರೂ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ತಮಿಳುನಾಡಿಗೆ ಹೋಲಿಸಿದರೇ ರಾಜ್ಯದಲ್ಲಿ ಸರಿಯಾಗಿ ತಯಾರಿ ಆಗಿಲ್ಲ ಎಂದು ಟೀಕಿಸಿದರು.
ಕಾವೇರಿ ವಿಚಾರದಲ್ಲಿ ಸರ್ಕಾರ ಸರಿಯಾಗಿ ಸಿದ್ದತೆ ನಡೆಸಿಲ್ಲ ಸರ್ವಪಕ್ಷ ಸಭೆಯಲ್ಲೂ ತಾಂತ್ರಿಕವಾಗಿ ಮಾಹಿತಿ ನೀಡಿಲ್ಲ. ವಕೀಲರ ಬದಲು ಸಿಎಂ ಅವರೇ ಹೇಳಿದರು ಎಂದು ಕಿಡಿಕಾರಿದರು.
Key words: government, not prepared, properly , Cauvery issue, Union Minister, HDK







