Sunday, August 30, 2026

BDA Apartments

Home Front Page ರೈತರ ಆಕ್ರೋಶದ ಕಟ್ಟೆಯೊಡೆಯುವ ಮುನ್ನ ನಾಲೆಗಳಿಗೆ ನೀರು ಹರಿಸಿ- ಕೇಂದ್ರ ಸಚಿವ HDK ಆಗ್ರಹ

ರೈತರ ಆಕ್ರೋಶದ ಕಟ್ಟೆಯೊಡೆಯುವ ಮುನ್ನ ನಾಲೆಗಳಿಗೆ ನೀರು ಹರಿಸಿ- ಕೇಂದ್ರ ಸಚಿವ HDK ಆಗ್ರಹ

ಬೆಂಗಳೂರು,ಜುಲೈ,14,2026 (www.justkannada.in):  ರೈತರ ಆಕ್ರೋಶದ ಕಟ್ಟೆಯೊಡೆಯುವ  ಮೊದಲು ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ  ಎಂದು ರಾಜ್ಯ ಸರ್ಕಾರಕ್ಕೆ  ಕೇಂದ್ರ ಸಚಿವ  ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಟ್ವಿಟ್ಟರ್ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮಂಡ್ಯದ ರೈತರು ಬೆಳೆಗಳಿಗೆ ನೀರು ಕೊಡುವಂತೆ ಒಂದು ತಿಂಗಳಿನಿಂದ ಬೇಡಿಕೊಳ್ಳುತ್ತಿದ್ದರೂ, ಈ ಸರ್ಕಾರದ ಕಿವಿಗಳು ಇದ್ದಕ್ಕಿದ್ದಂತೆ ಹರಿತವಾಗಿವೆ. ಈ ಸರ್ಕಾರದ  ಕಿವಿಗೆ ಜಾಣ ಕಿವುಡು ಬಂದಿದೆ. ರೈತರ ಭೂಮಿ ಕಸಿಯುವುದರಲ್ಲಿ ರಣೋತ್ಸಾಹ ತೋರುವ ಸರ್ಕಾರ ರೈತರ ಬೆಳೆ ಉಳಿಸಲು ಏಕೆ ನಿರುತ್ಸಾಹವೋ ಅರ್ಥವಾಗುತ್ತಿಲ್ಲ.

ಮಂಡ್ಯ ರೈತರ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ತಕ್ಷಣವ ನಾಲೆಗಳಿಗೆ ಕೆಆರ್ ಎಸ್ ನಿಂದ ನೀರು ಹರಿಸಬೇಕು ರೈತರ ಆಕ್ರೋಶ ಕಟ್ಟೆಯೊಡೆಯುವ ಮೊದಲು ನೀರು ಹರಿಸಿ ಎಂದು ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Key words: farmers, KRS Dam, Water, canals, Union Minister, HDK