Saturday, September 19, 2026

BDA Apartments

ಉದಯಗಿರಿ ಕಲ್ಲು ತೂರಾಟ ಕೇಸ್: ಫೆ.24 ರಂದು ಬೃಹತ್ ಜನಾಂದೋಲನ ಜಾಗೃತಿ ಸಭೆ BDA JK_Adv BDA Adv
Home Front Page ಉದಯಗಿರಿ ಕಲ್ಲು ತೂರಾಟ ಕೇಸ್: ಫೆ.24 ರಂದು ಬೃಹತ್ ಜನಾಂದೋಲನ ಜಾಗೃತಿ ಸಭೆ

ಉದಯಗಿರಿ ಕಲ್ಲು ತೂರಾಟ ಕೇಸ್: ಫೆ.24 ರಂದು ಬೃಹತ್ ಜನಾಂದೋಲನ ಜಾಗೃತಿ ಸಭೆ

ಮೈಸೂರು,ಫೆಬ್ರವರಿ,18,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಘಟನೆ ಖಂಡಿಸಿ ಫೆಬ್ರವರಿ 24ರಂದು ಬೃಹತ್ ಜನಾಂದೋಲನ ಜಾಗೃತಿ ಸಭೆಯನ್ನ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯು ಆಯೋಜಿಸಿದೆ.ಉದಯಗಿರಿ ಕಲ್ಲು ತೂರಾಟ ಕೇಸ್ nypunya1

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಉದಯಗಿರಿ ಗಲಭೆ ಘಟನೆಯನ್ನು ಖಂಡಿಸಿದ ಸಮಿತಿ ಸದಸ್ಯರು, ಈ ಸಂಬಂಧ ಫೆಬ್ರವರಿ 24 ರ ಬೆಳಗ್ಗೆ 11 ಗಂಟೆಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಸಭೆ ಆಯೋಜನೆ ಮಾಡಿದ್ದಾರೆ

ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆಯು ನಮ್ಮ ದೇಶದ ಆಂತರಿಕ ಸುರಕ್ಷತೆಗೆ, ಕಾನೂನು ಸುವ್ಯವಸ್ಥೆಗೆ ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲಿ ನಡೆದ ಘಟನೆಯು ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ. ಜೆ ಹಳ್ಳಿ ಘಟನೆಗೆ ಸಮಾನವಾಗಿದೆ. ಈ ಗಲಭೆಯು ಹಿಂದೆ ನಿಷೇಧಿತ ಪಿಎಫ್ ಐ ಸಂಘಟನೆಯ ಕೈವಾಡ ಇರುವ ಅನುಮಾನವಿದೆ. ಪ್ರಚೋದನಕಾರಿ ಹೇಳಿಕೆ ನೀಡಿದ ಮೌಲ್ವಿಯು ಪಿಎಫ್ಐ ಸಂಘಟನೆಯ ರಾಜಕೀಯ ಪಕ್ಷವಾದ ಎಸ್ ಡಿಪಿಐ ಕಾರ್ಯಕರ್ತನಾಗಿದ್ದಾನೆ ಎಂದು  ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಸಂಚಾಲಕರು ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೆ ಬಂಧಿತ ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸ್ ದಾಖಲಿಸಿ ಎನ್ ಐಎ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Key words: Udayagiri, stone pelting, case, e public awareness, meeting, Feb. 24