ನಾಳೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ

ಮೈಸೂರು,ಅಕ್ಟೋಬರ್,14,2023(www.justkannada.in):  ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ದಸರಾ ಉಪಸಮಿತಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಅಕ್ಟೋಬರ್ 16ರಂದು ಸಂಜೆ 7 ಗಂಟೆಗೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕದ ಪ್ರದರ್ಶನವಿದೆ.

ನಗರದ ಕಲಾಮಂದಿರ ಪಕ್ಕದ‌ ಕಿರು‌ ರಂಗಮಂದಿರದಲ್ಲಿ ‌ನಾಟಕ‌ ಪ್ರಯೋಗಗೊಳ್ಳಲಿದೆ. ಲೇಖಕ ಗಣೇಶ ಅಮೀನಗಡ ರಚಿಸಿರುವ ಈ ನಾಟಕವನ್ನು,  ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್ ತಂಡ‌ ಪ್ರಸ್ತುತಪಡಿಸಲಿದೆ.

ಒಂದೂವರೆ ಗಂಟೆಯ ಈ ನಾಟಕವು, ಕುವೆಂಪು ಅವರ ಮಂತ್ರ ಮಾಂಗಲ್ಯ ಆಧರಿಸಿದೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಬೇಕೆಂದು ತಂಡದ ಸಂಚಾಲಕ ಹರಿದತ್ತ ಪ್ರಕಟಣೆಯಲ್ಲಿ ಕೋರಿದ್ದಾರೆ.

Key words: Tomorrow – play -‘All Right Mantra Mangalya-mysore