Friday, July 31, 2026

BDA Apartments

Home Front Page “ನಾಳೆ ಅನ್ನದಾತರ ಪರೇಡ್, ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ”

“ನಾಳೆ ಅನ್ನದಾತರ ಪರೇಡ್, ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ”

ಮೈಸೂರು,ಜನವರಿ,25,2021(www.justkannada.in): ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಅನ್ನದಾತರ  ಪರೇಡ್ ಹಿನ್ನೆಲೆ ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ.jk

ದಿಲ್ಲಿಯ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ರೈತಸಂಘಟನೆಗಳು ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿವೆ.

ನಗರದ ಮಹಾರಾಜ ಕಾಲೇಜು ಆವರಣದಿಂದ ಟ್ರ್ಯಾಕ್ಟರ್ ಮೆರವಣಿಗೆ‌ ಆರಂಭ. ಮೈಸೂರಿಂದ 200ಕ್ಕೂ ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ. ಪ್ರತಿಭಟನೆಯಲ್ಲಿ ಮೈಸೂರು ಭಾಗದಿಂದ 10ಸಾವಿರ ರೈತರು ಭಾಗವಹಿಸಲಿದ್ದಾರೆ.Tomorrow-another-day-Parade-Mysore-Over 200-Tractor-Bangalore 

ಸಾಂದರ್ಭಿಕ ಚಿತ್ರಶ್ರೀರಂಗಪಟ್ಟಣ, ಪಾಂಡವಪುರ,  ಮಂಡ್ಯ, ಚನ್ನಪಟ್ಟಣ, ಬಿಡದಿ ಮೂಲಕ ಬೆಂಗಳೂರಿಗೆ ಟ್ರ್ಯಾಕ್ಟರ್ ಮೆರವಣಿಗೆ ಸಾಗಲಿದೆ. 5000 ಮೋಟಾರ್ ಬೈಕ್, 500ಇತರೆ ವಾಹನಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಪೆರೇಡ್ ಮೂಲಕ ಕೇಂದ್ರದ ಕೃಷಿ ಮಸೂದೆ ವಾಪಸ್ಸಾತಿಗೆ ಆಗ್ರಹಿಸಲು ತೀರ್ಮಾನಿಸಲಾಗಿದೆ.

key words : Tomorrow-another-day-Parade-Mysore-Over 200-Tractor-Bangalore