Saturday, September 19, 2026

BDA Apartments

ನಿಫಾ ವೈರಸ್ ಹರಡುವಿಕೆ ತಡೆಗೆ ಕರ್ನಾಟಕದಲ್ಲಿ ಕಣ್ಗಾವಲು BDA JK_Adv BDA Adv
Home Front Page ನಿಫಾ ವೈರಸ್ ಹರಡುವಿಕೆ ತಡೆಗೆ ಕರ್ನಾಟಕದಲ್ಲಿ ಕಣ್ಗಾವಲು

ನಿಫಾ ವೈರಸ್ ಹರಡುವಿಕೆ ತಡೆಗೆ ಕರ್ನಾಟಕದಲ್ಲಿ ಕಣ್ಗಾವಲು

ಬೆಂಗಳೂರು, ಸೆಪ್ಟೆಂಬರ್ 09, 2021 (www.justkannada.in): ನಿಫಾ ವೈರಸ್ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಗಳನ್ನು ಅಳವಡಿಸಿಕೊಳ್ಳಬೇಕು. ರಾಜ್ಯ ಕೇರಳದಲ್ಲಿ ವರದಿಯಾದ ನಿಫಾ ವೈರಸ್ ಪ್ರಕರಣಗಳ ನಡುವೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಜ್ವರ, ಬದಲಾದ ಮಾನಸಿಕ ಸ್ಥಿತಿ, ತೀವ್ರ ದೌರ್ಬಲ್ಯ, ತಲೆನೋವು, ಉಸಿರಾಟದ ತೊಂದರೆ, ಕೆಮ್ಮು, ವಾಂತಿ, ಸ್ನಾಯು ನೋವು, ಸೆಳೆತ ಮತ್ತು ಅತಿಸಾರದಂತಹ ನಿಫಾ ವೈರಸ್ ಲಕ್ಷಣಗಳಿಗಾಗಿ ಕೇರಳದಿಂದ ಬರುವವರ ಮೇಲೆ ನಿಗಾ ಇಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ನಿಫಾ ಹರಡುವಿಕೆಯನ್ನು ಮುಂಚಿತವಾಗಿ ಪತ್ತೆ ಹಚ್ಚಲು ಎನ್ಸೆಫಾಲಿಟಿಸ್ ಪ್ರಕರಣಗಳ ಗುಚ್ಛಗಳನ್ನು ಗುರುತಿಸಲು ವ್ಯವಸ್ಥಿತ ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ತಿಳಿಸಿದ್ದಾರೆ.

key words: Surveillance in Karnataka to halt the spread of Nipah virus