Wednesday, August 5, 2026

BDA Apartments

Home Front Page ಸೋನಿಯಾಗಾಂಧಿ ಇಡಿ ವಿಚಾರಣೆಗೆ ಖಂಡನೆ: ರಾಷ್ಟ್ರಪತಿಗೆ ದೂರು ನೀಡಲು ತೆರಳುತ್ತಿದ್ದ ‘ಕೈ’ ಸಂಸದರು ಪೊಲೀಸರ ವಶಕ್ಕೆ.

ಸೋನಿಯಾಗಾಂಧಿ ಇಡಿ ವಿಚಾರಣೆಗೆ ಖಂಡನೆ: ರಾಷ್ಟ್ರಪತಿಗೆ ದೂರು ನೀಡಲು ತೆರಳುತ್ತಿದ್ದ ‘ಕೈ’ ಸಂಸದರು ಪೊಲೀಸರ ವಶಕ್ಕೆ.

ನವದೆಹಲಿ,ಜುಲೈ,26,2022(www.justkannada.in):  ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ರಾಷ್ಟ್ರಪತಿಗೆ ದೂರು ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಸಂಸದರನ್ನ ಪೊಲೀಸರು ವಶಕ್ಕೆ ಪಡೆದರು.

ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಮೂಲಕ  ರಾಷ್ಟ್ರಪತಿಗಳಿಗೆ ದೂರು ನೀಡಲು ಕಾಂಗ್ರೆಸ್ ಸಂಸದರು ತೆರಳುತ್ತಿದ್ದರು. ಈ ವೇಳೆ ಸಂಸತ್ ಭವನದ ಆವರಣದಲ್ಲಿ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಸಂಸದರು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.

ಇದೇ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು ಪ್ರತಿಭಟನಾನಿರತರನ್ನ ವಶಕ್ಕೆ ಪಡೆದು ಬಸ್ ನಲ್ಲಿ ಪೊಲೀಸರು ಕರೆದೊಯ್ದರು. ಇನ್ನು ರಾಜ್ಯದಲ್ಲೂ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Key words: Sonia Gandhi – ED -inquiry-Congress- MPs-protest