Sunday, August 30, 2026

BDA Apartments

Home Front Page ಮಹಿಳಾ ಮೀಸಲಾತಿಗಾಗಿ ವಿಶೇಷ ಅಧಿವೇಶನ: ಕೇಂದ್ರದ ವಿರುದ್ದ ಸೋನಿಯಾಗಾಂಧಿ ಆಕ್ರೋಶ

ಮಹಿಳಾ ಮೀಸಲಾತಿಗಾಗಿ ವಿಶೇಷ ಅಧಿವೇಶನ: ಕೇಂದ್ರದ ವಿರುದ್ದ ಸೋನಿಯಾಗಾಂಧಿ ಆಕ್ರೋಶ

ನವದೆಹಲಿ,ಏಪ್ರಿಲ್,13,2026 (www.justkannada.in):  ಮಹಿಳಾ ಮೀಸಲಾತಿ ಜಾರಿಗಾಗಿ ವಿಶೇಷ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದ  ವಿಶೇಷ ಅಧಿವೇಶನದ ಮೂಲ ಉದ್ದೇಶ ಬೇರೆ ಇದೆ. ಮಹಿಳಾ ಮೀಸಲಾತಿ ಮಸೂದೆಗಾಗಿ ವಿಶೇಷ  ಅಧಿವೇಶನ ಕರೆದಿಲ್ಲ ಕ್ಷೇತ್ರ ಪುನರ್ ವಿಂಗಡಣೆಗಾಗಿ ಅಧಿವೇಶನ ಕರೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಎಂಬುದು ನೆಪಮಾತ್ರ  ತರಾತುರಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ಪ್ರಯತ್ನ  ಮಾಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ನಡೆ ಸಂವಿಧಾನದ ಮೇಲಿನ ದಾಳಿ ಕೇಂದ್ರ ಸರ್ಕಾರಕ್ಕೆ ಜಾತಿಜನಗಣತಿಯನ್ನು ವಿಳಂಬಗೊಳಿಸುವ ಉದ್ದೇಶವಿದೆ  ಐದು ರಾಜ್ಯಗಳಲ್ಲಿ  ಚುನಾವಣೆ ಇದೆ. ಈ ಸಮಯದಲ್ಲಿ ಮಹಿಳಾ ಮಿಸಲಾತಿ ಮಸೂದೆ ತಂದಿದ್ದಾರೆ ಎಂದು ಕಿಡಿಕಾರಿದರು.

Key words:  Special session, women, reservation, Sonia Gandhi