ಸಿದ್ದರಾಮಯ್ಯಗೆ ನೈತಿಕತೆ ಇದ್ದರೇ ರಾಜೀನಾಮೆ ನೀಡಲಿ- ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹ

ಬೆಂಗಳೂರು,ನವೆಂಬರ್,24,2023(www.justkannada.in): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ನೀಡಿದ ಅನುಮತಿ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೋವಿಂದ ಕಾರಜೋಳ, ಇದು ಸರ್ಕಾರದ ಸಂವಿಧಾನ ಬಾಹಿರ ತೀರ್ಮಾನ ನೈತಿಕತೆ ಇದ್ದರೇ ಸಿಬಿಐ ತನಿಖೆ ವರದಿ ಬರುವ ತನಕ ಕಾಯಬೇಕಿತ್ತು. ಯಾರ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿದ್ದಾರೆ  ಎಂಬುದನ್ನ ಬಹಿರಂಗಪಡಿಸಬೇಕು. ಸೋನಿಯಾ ರಾಹುಲ್  ಗಾಂಧಿ ಒತ್ತಡಕ್ಕೆ ಮಣಿದ್ರಾ..?  ನೈತಿಕತೆ ಇದ್ದರೆ  ಸಿದ್ದರಾಮಯ್ಯ ರಾಜೀನಾಮೆ ನೀಡಲಿ  ಎಂದು ಒತ್ತಾಯಿಸಿದರು.

Key words:  Siddaramaiah- resign – morals- former minister- Govinda Karajola