Friday, July 31, 2026

BDA Apartments

Home Front Page ಅನರ್ಹ ಶಾಸಕರು ಹೊರಬರಲು ಸಿದ್ಧರಾಮಯ್ಯ ಕಾರಣ: ಕಾಂಗ್ರೆಸ್ ವಿರುದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾಗ್ದಾಳಿ…

ಅನರ್ಹ ಶಾಸಕರು ಹೊರಬರಲು ಸಿದ್ಧರಾಮಯ್ಯ ಕಾರಣ: ಕಾಂಗ್ರೆಸ್ ವಿರುದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾಗ್ದಾಳಿ…

ಬೆಂಗಳೂರು,ನ,3,2019(www.justkannada.in):  ಅನರ್ಹ ಶಾಸಕರು ರಾಜೀನಾಮೆ ನೀಡಿ ಹೊರಬರಲು ಸಿದ್ಧರಾಮಯ್ಯ ಕಾರಣ. ಮೊದಲು ಈ ಬಗ್ಗೆ ತನಿಖೆಯಾಗಲಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಸಿಎಂ ಬಿಎಸ್ ವೈ ಆಡಿಯೋ ಲೀಕ್ ಬಗ್ಗೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅಂತರಿಕವಾಗಿ ಮಾತನಾಡಿರೋದನ್ನ ದೊಡ್ಡದಾಗಿ ಮಾಡುತ್ತಿದ್ದಾರೆ.  ಈ ಹಿಂದೆ ಸಿದ್ಧರಾಮಯ್ಯ ಮಾತನಾಡಿದ್ದ ವಿಡಿಯೋ ಲೀಕ್ ಆಗಿತ್ತು. ಅದರ ಬಗ್ಗೆ ತನಿಖೆಯಾಗಲಿ ಎಂದು ತಿಳಿಸಿದರು.

ಸಮ್ಮಿಸ್ರ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ.  ಹೆಚ್.ಡಿ ಕುಮಾರಸ್ವಾಮಿ ಹಾದಿಯಾಗಿ ಅನರ್ಹ ಶಾಸಕರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ. ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

Key words: siddaramaiah- Congress-disqualified MLA-  Home Minister -Basavaraja Bommai