ಜೆಡಿಎಸ್​ ಶಾಸಕರಿಗೆ ರಾಜ್ಯ ಸರ್ಕಾರದಿಂದ ಶಾಕ್.

ಬೆಂಗಳೂರು,ಆಗಸ್ಟ್,31,2023(www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಜೆಡಿಎಸ್ ಶಾಸಕರಿಗೆ ಶಾಕ್ ನೀಡಿದ್ದು, ಜೆಡಿಎಸ್ ​ ಶಾಸಕರ ಕ್ಷೇತ್ರಕ್ಕೆ ಮಂಜೂರಾಗಿದ್ದ ಮನೆಗಳನ್ನು ಶಿಫ್ಟ್​​​ ಮಾಡಿದೆ.

ಜೆಡಿಎಸ್​ ಶಾಸಕರ ಕ್ಷೇತ್ರಕ್ಕೆ ಮಂಜೂರಾಗಿದ್ದ ಮನೆಗಳನ್ನು ಕಾಂಗ್ರೆಸ್​​ ಶಾಸಕರ ಕ್ಷೇತ್ರಗಳಿಗೆ  ಶಿಫ್ಟ್ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ತುರುವೇಕೆರೆಗೆ ಮಂಜೂರಾಗಿದ್ದ 3,375 ಮನೆಗಳನ್ನು ಕುಣಿಗಲ್ ​ಗೆ ಶಿಫ್ಟ್​ ಮಾಡಿದೆ. ಈ ಹಿನ್ನೆಲೆ ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್​ ವಿರುದ್ಧ ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ರೋಶ ಹೊರ ಹಾಕಿದ್ದಾರೆ.

Key words: Shock – JDS -MLAs -state government.