ಮತ್ತೆ ಒಂದಾಗುತ್ತಿದ್ದಾರೆ ‘ತೂಗುದೀಪ’ ಸಹೋದರರು !

ಬೆಂಗಳೂರು, ಅಕ್ಟೋಬರ್ 29, 2019 (www.justkannada.in): ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದಲ್ಲಿ ‘ಶಿವನಂದಿ’ ಚಿತ್ರ ಮೂಡಿಬರಲಿದೆ.

ಹೌದು. ದಿನಕರ್ ಹಾಗೂ ದರ್ಶನ್ ಮತ್ತೆ ಒಂದಾಗುತ್ತಿದ್ದಾರೆ. ‘ಶಿವನಂದಿ’ ಚಿತ್ರದ ಮೂಲಕ ಇದು ಮತ್ತೆ ಸಾಧ್ಯವಾಗುತ್ತಿದೆ. ಇದು ದರ್ಶನ್ ಅಭಿಮಾನಿಗಳಿಗೆ ಇನ್ನು ಮುಂದೆ ನಿರಂತರ ಹಬ್ಬದೂಟ ಬಡಿಸಲಿದೆ.

ಇದರ ಬೆನ್ನಲ್ಲೇ ‘ಒಡೆಯ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ವರ್ಷಕ್ಕೆ ಕನಿಷ್ಠ ಮೂರು ಚಿತ್ರಗಳಲ್ಲಿ ನಟಿಸಲು ದರ್ಶನ್ ತೀರ್ಮಾನಿಸಿದ್ದಾರೆ.