Saturday, August 8, 2026

BDA Apartments

Home Front Page 4 ವರ್ಷಗಳಿಂದ ಬಿಜೆಪಿಯಿಂದ ಭ್ರಷ್ಟಾಚಾರ: ರಾಜ್ಯದ ಸಮಸ್ಯೆಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ- ಕಾಂಗ್ರೆಸ್ ನಾಯಕ ರಾಹುಲ್...

4 ವರ್ಷಗಳಿಂದ ಬಿಜೆಪಿಯಿಂದ ಭ್ರಷ್ಟಾಚಾರ: ರಾಜ್ಯದ ಸಮಸ್ಯೆಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ.

ಶಿವಮೊಗ್ಗ,ಮೇ,2,2023(www.justkannada.in):  ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ. ಮೋದಿಯವರು ತಮ್ಮ ಪ್ರಚಾರದ ವೇಳೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಂದು ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್, ಎಲ್ಲಾ ಜಾತಿ ವರ್ಗಗಳಿಗೆ ಸಮಾನತೆ ನೀಡುತ್ತಿದೆ. ಮೋದಿಯವರು ಯಾವುದೇ ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ನಾಯಕರ ಹೆಸರು ಹೇಳಲ್ಲ. ಬಸವರಾಜ ಬೊಮ್ಮಯಿ, ಬಿಎಸ್ ಯಡಿಯೂರಪ್ಪ ಹೆಸರನ್ನು ಹೇಳುವುದಿಲ್ಲ. ಆದರೆ ನಾನು ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಹೆಸರು ಹೇಳುತ್ತೇನೆ . ರಾಜ್ಯದ ಸಮಸ್ಯೆಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ ರಾಜ್ಯದಲ್ಲಿ4 ವರ್ಷಗಳಿಂದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ.

ತೀರ್ಥಹಳ್ಳಿಯಲ್ಲಿ ಯಾಕೆ ರೈತರಿಗೆ ಭೂಮಿ ನೀಢುತ್ತಿಲ್ಲ. ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಕುರಿತು ಮೋದಿ ಮಾತನಾಡಲ್ಲ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಎಲ್ಲಾ ದಾಖಲೆ ಮುರಿದಿದೆ. ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ.  ನಿರುದ್ಯೋಗ ಸಮಸ್ಯೆ ಬಡತನ ತಾಂಡವಾಡುತ್ತಿದೆ ಎಂದು ರಾಹುಲ್ ಗಾಂಧಿ ಗುಡುಗಿದರು.

Key words: shimogga-Congress-Rahul Gandhi-assembly-election