Thursday, September 17, 2026

BDA Apartments

Home Front Page ಆರೋಪದಿಂದ ಮುಕ್ತನಾಗುವ ವಿಶ್ವಾಸವಿತ್ತು: ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ- ಕೆ.ಎಸ್ ಈಶ್ವರಪ್ಪ ಸಂತಸ.

ಆರೋಪದಿಂದ ಮುಕ್ತನಾಗುವ ವಿಶ್ವಾಸವಿತ್ತು: ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ- ಕೆ.ಎಸ್ ಈಶ್ವರಪ್ಪ ಸಂತಸ.

ಶಿವಮೊಗ್ಗ,ಜುಲೈ,20,2022(www.justkannada.in): ಗುತ್ತಿಗೆದಾರ  ಸಂತೋಷ್  ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ ಹಿನ್ನೆಲೆ ಈ ಕುರಿತು ಸಂತಸ ವ್ಯಕ್ತಪಡಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ನಾನು ಆರೋಪದಿಂದ ಮುಕ್ತನಾಗುವ ವಿಶ್ವಾಸವಿತ್ತು. ಮುಂದೆ ಪಕ್ಷದ ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ ಎಂದಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ಬಿ ರಿರ್ಪೋರ್ಟ್ ಹಾಕಿರುವ ಸುದ್ದಿ ಕೇಳಿ ಸಂತಸವಾಗಿದೆ. ತಪ್ಪು ಮಾಡಿಲ್ಲವೆಂದು ಮನೆ ದೇವರು ಚೌಡೇಶ್ವರಿ ಮೇಲೆ ಆಣೆ ಮಾಡಿದ್ದೆ. ತಾಯಿ ಚೌಡೇಶ್ವರಿ  ಆಶೀರ್ವಾದದಿಂದ ಖುಲಾಸೆಯಾಗಿದೆ ಎಂದರು.

ಆರೋಪದಿಂದ ಮುಕ್ತನಾಗುವ ವಿಶ್ವಾಸವಿತ್ತು. ನನ್ನ ವಿರುದ್ಧ ಆರೋಪಿಸಿದ್ದ ವಿಪಕ್ಷಗಳಿಗೆ ಬಿ ರಿಪೋರ್ಟ್ ಉತ್ತರ.  ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ನೀಡಿದ್ದರೂ ನಿಭಾಯಿಸುವೆ. ಮುಂದಿನ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: Santosh –suicide- case- former minister -KS Eshwarappa-happy