ದೃಷ್ಟಿವಿಶೇಷಚೇತನರ ಕ್ಷಮೆ ಕೋರಿದ ‘ಸಖತ್’ ಡೈರೆಕ್ಷರ್ ಸಿಂಪಲ್ ಸುನಿ

ಬೆಂಗಳೂರು, ನವೆಂಬರ್ 28, 2021 (www.justkannada.in): ಗಣೇಶ್ ನಟನಯ ಸಖತ್ ಚಿತ್ರದ ಕುರಿತು ದೃಷ್ಟಿ ವಿಶೇಷಚೇತನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದ ಕೋರ್ಟ್ ನ ಒಂದು ಸನ್ನಿವೇಶದಲ್ಲಿ ಅಂಧ ಎಂದು ಬಳಸಿದ್ದು ಅದು ದೃಷ್ಟಿ ವಿಶೇಷಚೇನತ ಸಮುದಾಯದ ಅವಹೇಳನ ಎಂಬ ದೂರು ಕೇಳಿಬಂದಿದೆ.

ಹೀಗಾಗಿ ಅಂಧ ಅಭಿಮಾನಿಗಳು ಅದರ ಸಲುವಾಗಿ ಚಿತ್ರ ಪ್ರದರ್ಶನಕ್ಕೆ ಸ್ಟೇ ತರಲು ಮುಂದಾಗಿದ್ದಾರೆ.

ಕ್ಷಮಾಪಣೆ ಕೇಳಿದ ಸುನಿ: ಇನ್ನು ಸಖತ್ ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ ಅಂಧ ಸಮುದಾಯದಕ್ಕೆ ಪತ್ರದ ಮೂಲಕ ಕ್ಷಮಾಪಣೆ ಕೋರಿ ಅಂಧ ಸಮುದಾಯದಕ್ಕೆ ಸಿನಿಮಾ ತೋರಿಸುತ್ತಿದ್ದು ನೋಡಿದ ನಂತರ ಹೇಳುವ ತಪ್ಪುಗಳನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದಾರೆ.