Saturday, August 8, 2026

BDA Apartments

Home Front Page ಮುಂದಿನ ಬಜೆಟ್ ನಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ಮರುನಿರ್ಮಾಣಕ್ಕೆ ಆದ್ಯತೆ –ಡಿಸಿಎಂ ಗೋವಿಂದ ಎಂ ಕಾರಜೋಳ...

ಮುಂದಿನ ಬಜೆಟ್ ನಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ಮರುನಿರ್ಮಾಣಕ್ಕೆ ಆದ್ಯತೆ –ಡಿಸಿಎಂ ಗೋವಿಂದ ಎಂ ಕಾರಜೋಳ ಹೇಳಿಕೆ…

ಬೆಂಗಳೂರು. ಡಿ.31,2019(www.justkannada.in):  ಲೋಕೋಪಯೋಗಿ ಇಲಾಖೆಯು 2020-21 ನೇ ಸಾಲಿನ ಬಜೆಟ್ ನಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಮರುನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಇ ಪ್ರೊಕ್ಯೂರ್‍ಮೆಂಟ್‍ನಿಂದಾಗಿ ಕೆಲವು ಟೆಂಡರ್ ಪ್ರಕ್ರಿಯೆಗೆ ತಾಂತ್ರಿಕವಾಗಿ ವಿಳಂಭವಾಗಿದೆ. ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.  ಈ ಆಯವ್ಯಯದಲ್ಲಿ  ಈ ಕಾಮಗಾರಿಗಳಿಗೆ ಮರುನಿರ್ಮಾಣ ಮಾಡಲಾಗುವುದು. ಫಾಸ್ಟ್ರ್ಯಾಕ್ ನಲ್ಲಿ  ಸಂಭವಿಸುತ್ತಿರುವ  ಕೆಲವು ನ್ಯೂನತೆಗಳ ಕುರಿತು ಕೇಂದ್ರ ಭೂಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 94 ಅಪಘಾತ ಸ್ಥಳಗಳೆಂದು ಗುರುತಿಸಿದ್ದು, ಈ ಸ್ಥಳಗಳನ್ನು ಬ್ಲಾಕ್‍ಸ್ಪಾಟ್ ಎಂದು ಗುರುತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ 249, ಕೆಶಿಪ್ ನ 20, ರಸ್ತೆ ಸಾರಿಗೆ ನಿಗಮದ 2, ರಾಷ್ಟ್ರೀಯ ಹೆದ್ದಾರಿಯ 172, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 392, ರಾಷ್ಟ್ರೀಯ ಹೆದ್ದಾರಿಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 69,  ಬಿಬಿಎಂಪಿಯ 31, ಬೆಳಗಾವಿಯ ಮಹಾನಗರ ಪಾಲಿಕೆಯ 2, ತುಮಕೂರು ಮಹಾನಗರ ಪಾಲಿಕೆಯ 3 ಸ್ಥಳಗಳೆಂದು ಗುರುತಿಸಲಾಗಿದೆ. ಈ ಅಪಘಾತ ಸ್ಥಳಗಳಲ್ಲಿ ರಸ್ತೆಯ ಜಾಗವನ್ನು ವಿಸ್ತರಿಸಿ, ಅಪಘಾತ ತಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Key words: Repair-flood-damaged roads – next budget-DCM Govinda M Karajola