Tuesday, August 4, 2026

BDA Apartments

Home Cinema ನಟ ದರ್ಶನ್ ಸೇರಿ 6 ಆರೋಪಿಗಳು ಕೋರ್ಟ್ ಗೆ ಹಾಜರು: ಅ.31ಕ್ಕೆ ವಿಚಾರಣೆ ನಿಗದಿ

ನಟ ದರ್ಶನ್ ಸೇರಿ 6 ಆರೋಪಿಗಳು ಕೋರ್ಟ್ ಗೆ ಹಾಜರು: ಅ.31ಕ್ಕೆ ವಿಚಾರಣೆ ನಿಗದಿ

ಬೆಂಗಳೂರು,ಅಕ್ಟೋಬರ್,29,2025 (www.justkannad.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 6 ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಿದ್ದು ವಿಚಾರಣೆಯನ್ನ ಅಕ್ಟೋಬರ್ 31 ಕ್ಕೆ  ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ನಿಗದಿಪಡಿಸಿದೆ.

ಇಂದು ಪ್ರಕರಣದ 1ನೇ ಆರೋಪಿ ಪವಿತ್ರಾಗೌಡ, 2ನೇ ಆರೋಪಿ  ನಟ ನಟ ದರ್ಶನ್ ಸೇರಿ 6 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ವಿಚಾರಣೆಯನ್ನ ಅಕ್ಟೋಬರ್ 31ಕ್ಕೆ ನಿಗದಿಪಡಿಸಿದ ಹೈಕೋರ್ಟ್, ತಿಂಗಳಿಗೊಮ್ಮೆ ಚಾದರ್ ಬಟ್ಟೆ ಒದಗಿಸಲು ಸೂಚನೆ ನೀಡಿತು. ಹಾಗೆಯೇ ಬೇರೆ ಬ್ಯಾರಕ್ ಗೆ ಗೆ ಶಿಫ್ಟ್ ಮಾಡುವ ಆಯ್ಕೆಯನ್ನ ಜೈಲು ಅಧಿಕಾರಿಗಳಿಗೆ ನೀಡಿತು. ಸಾಧ್ಯವಾದರೆ ಬೇರೆ ಬ್ಯಾರಕ್ ಗೆ ಸ್ಥಳಾಂತರ ಮಾಡುಲು ಸೂಚನೆ ನೀಡಿತು.

Key words: Renukaswamy murder case, actor, Darshan , court