Wednesday, August 12, 2026

BDA Apartments

Home Front Page ಕೇಂದ್ರದಿಂದ ಪರಿಹಾರ ವಿಳಂಬ: ಸಮರ್ಥಿಸಿಕೊಂಡ ಸಿಎಂ ಬಿಎಸ್ ಯಡಿಯೂರಪ್ಪ….

ಕೇಂದ್ರದಿಂದ ಪರಿಹಾರ ವಿಳಂಬ: ಸಮರ್ಥಿಸಿಕೊಂಡ ಸಿಎಂ ಬಿಎಸ್ ಯಡಿಯೂರಪ್ಪ….

ಬೆಂಗಳೂರು,ಆ,15,2019(www.justkannada.in):   ರಾಜ್ಯದಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ನಲುಗಿರುವ ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ವಿಳಂಬವಾಗಿರುವುದನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ದೇಶದಲ್ಲಿ ಹಲವು ಕಡೆ ಅತಿವೃಷ್ಟಿ ಸಂಭವಿಸಿದೆ. ಮಹಾರಾಷ್ಟ್ರ, ಕೇರಳದಲ್ಲೂ ಮಳೆಯಿಂದಾಗಿ  ಪ್ರವಾಹ ಉಂಟಾಗಿದೆ. ಅದ್ದರಿಂದ ರಾಜ್ಯಕ್ಕೆ ನೆರೆ ಪರಿಹಾರ ಬರುವುದು ತಡ ಆಗಿರಬಹುದು ಎಂದು ಹೇಳೀದ್ದಾರೆ.

ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಪ್ರಧಾನಿ ಮೋದಿಯವರು ಭೇಟಿಗೆ ಸಮಯ ಕೊಟ್ಟಿದ್ದಾರೆ. ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಹಾಗೇಯೇ  ಕೇಂದ್ರ ಸಚಿವರನ್ನೂಸಹ  ಭೇಟಿ ಮಾಡಬೇಕಿದೆ. ಅದ್ದರಿಂದ ಎರಡನೇ ದಿನವೂ ಅಲ್ಲೇ ಇರ್ತೇನೆ. ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನ ಭೇಟಿ ಮಾಡಿ ಕ್ಯಾಬಿನೆಟ್ ರಚನೆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: Relief -delay – center-Defended -CM BS Yeddyurappa.