ಮೈಸೂರು,ಜೂನ್,2,2025 (www.justkannada.in): ಕಳೆದ ಒಂದುವರೆ ತಿಂಗಳಿನಿಂದ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೊನೆಯ ಹಂತಕ್ಕೆ ಬಂದಿದ್ದು ನಾಳೆ ಫೈನಲ್ ನಲ್ಲಿ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಕಪ್ ಗಾಗಿ ಸೆಣಸಾಟ ನಡೆಸಲಿವೆ. ಈ ಮಧ್ಯೆ 17 ವರ್ಷಗಳಿಂದಲೂ ಕಪ್ ಎತ್ತಿ ಹಿಡಿಯದ ಆರ್.ಸಿಬಿ ಈ ಬಾರಿ ಫೈನಲ್ ಗೆದ್ದು ಕಪ್ ಗೆಲ್ಲಲಿ ಎಂದು ಅಭಿಮಾನಿಗಳ ಆಸೆಯಾಗಿದೆ. ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರ್ ಸಿಬಿ ಗೆಲುವಿಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಈ ಬಾರಿ ಆರ್ ಸಿಬಿ ಗೆಲ್ಲಲಿ ಎಂದು ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವರಿಗೆ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 18 ವರ್ಷಗಳ ಕನಸು ನನಸಾಗಬೇಕು. ಈ ಬಾರಿ ಆರ್ ಸಿಬಿ ಕಪ್ಗೆದ್ದೇ ಗೆಲ್ಲುತ್ತೆ ಎಂದು ಶಾಸಕ ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದ್ವೇಷದ ರಾಜಕಾರಣ
ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹರೀಶ್ ಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಚಿವ ಜಮೀರ್ ಅಹಮದ್ ಯಾವುದೇ ತಪ್ಪು ಮಾಡಿಲ್ಲ. ಜೆಡಿಎಸ್ ಪಕ್ಷದಲ್ಲಿದ್ದ ಎಲ್ಲರನ್ನೂ ಹೊರ ಹಾಕಿದರು. ಈಗ ಅವರೇ ಎಲ್ಲರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಮಾಗಡಿ ಬಾಲಕೃಷ್ಣ, ಚಲುವರಾಯಸ್ವಾಮಿ, ಜಮೀರ್ ಅಹಮದ್ ಎಲ್ಲರ ಮೇಲೂ ಅವರಿಗೆ ಕೋಪವಿದೆ . ಜಮೀರ್ ಅಹಮ್ಮದ್ ಯಾವುದೇ ತಪ್ಪು ಮಾಡುವವರಲ್ಲ. ಹಗರಣ ನಡೆದಿದೆ ಅಂತ ಈವಾಗ ಹೇಳುತ್ತಿರುವವರು ಆವಾಗ ಏನ್ ಮಾಡುತ್ತಿದ್ದರು ? ಹಗರಣ ನಡೆಯುವ ಮುನ್ನ ತಡೆಯಬಹುದಿತ್ತಲ್ಲವೇ? ಎಚ್.ಡಿ.ಕುಮಾರಸ್ವಾಮಿ ಹಿಟ್ ಅಂಡ್ ರನ್ ರೀತಿ ಮೊದಲಿನಿಂದಲೂ ಆರೋಪ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ
ರಾಜ್ಯದಲ್ಲಿ ಸಚಿವ ಸಂಪುಟದ ಸದಸ್ಯರು ಬದಲಾಗಬಹುದು. ಈ ಬಾರಿ ಹೊಸಬರಿಗೆ ಅವಕಾಶ ಸಿಗಬಹುದು. ಆದರೆ ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಮೈಸೂರಿನ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುವ ವಿಶ್ವಾಸವಿದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಂದೆ ದೇವರು, ಜನರ ಆಶೀರ್ವಾದ ಇದ್ದರೆ ನೋಡೋಣ ಎಂದರು.
ನಟ ಕಮಲ್ ಹಾಸನ್ ಒಬ್ಬ ಅಯೋಗ್ಯ
ಇದೇ ವೇಳೆ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಹರೀಶ್ ಗೌಡ, ನಟ ಕಮಲ್ ಹಾಸನ್ ಒಬ್ಬ ಅಯೋಗ್ಯ. ಕಮಲ್ ಹಾಸನ್ ಗೆ ಯಾವುದೇ ಇತಿಹಾಸ ಗೊತ್ತಿಲ್ಲ. ಕನ್ನಡ ಭಾಷೆಯ ಬಗ್ಗೆ ಅವನಿಗೆ ಅರಿವಿಲ್ಲ. ಅವನೊಬ್ಬ ಅಜ್ಞಾನಿ, ಅಯೋಗ್ಯ. ಅವನು ಕನ್ನಡಿಗರ ಕ್ಷಮೆ ಕೇಳಬೇಕು ಎಂದರು.
Key words: Special pooja, MLA, Harish Gowda, RCB, victory, tomorrow