ಡೇ-ನೈಟ್ ಟೆಸ್ಟ್ ಗೂ ಮುನ್ನ ಉಜ್ಜಯಿನಿ ಮಹಾಕಾಳೇಶ್ವರನಿಗೆ ರವಿ ಶಾಸ್ತ್ರಿ ವಿಶೇಷ ಪೂಜೆ

ಕೊಲ್ಕತ್ತಾ, ನವೆಂಬರ್ 18, 2019 (www.justkannada.in): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ, ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ರವಿ ಶಾಸ್ತ್ರಿಗೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್, ಫಿಜಿಯೋ ನಿತಿನ್ ಪಟೇಲ್ ಸಾಥ್ ನೀಡಿದರು.

ಸಪೋರ್ಟಿಂಗ್ ಸ್ಟಾಫ್ ನಂತರ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ಸಹ, ಮಹಾಕಾಳೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದ್ರು. 12 ಜೋತೀರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯ, ಹಿಂದುಗಳ ಪವಿತ್ರ ತಾಣವಾಗಿದೆ.

ಈ ಹಿಂದೆಯೂ ರವಿ ಶಾಸ್ತ್ರಿ ಮಹಾಕಾಳೇಶ್ವರ ದರ್ಶನ ಪಡೆದಿದ್ರು.