Friday, September 18, 2026

BDA Apartments

ರಾಜ್ಯಕ್ಕೆ ಆಗಮಿಸಿದ ರೈತ ನಾಯಕರಾದ ರಾಕೇಶ್ ಟಿಕಾಯಿತ್, ಯದುವೀರ್ ಸಿಂಗ್ ಅವರಿ...
Home Front Page ರಾಜ್ಯಕ್ಕೆ ಆಗಮಿಸಿದ ರೈತ ನಾಯಕರಾದ ರಾಕೇಶ್ ಟಿಕಾಯಿತ್, ಯದುವೀರ್ ಸಿಂಗ್ ಅವರಿಗೆ ಸ್ವಾಗತ…..

ರಾಜ್ಯಕ್ಕೆ ಆಗಮಿಸಿದ ರೈತ ನಾಯಕರಾದ ರಾಕೇಶ್ ಟಿಕಾಯಿತ್, ಯದುವೀರ್ ಸಿಂಗ್ ಅವರಿಗೆ ಸ್ವಾಗತ…..

ಬೆಂಗಳೂರು,ಮಾರ್ಚ್,20,2021(www.justkannada.in): ಕರ್ನಾಟಕದ ರೈತ ಚಳುವಳಿಯನ್ನು ಬಲಗೊಳಿಸಲು  ರಾಜ್ಯಕ್ಕೆ ಆಗಮಿಸಿರುವ ಕಿಸಾನ್ ಸಂಯುಕ್ತ ಮೋರ್ಚಾ ರಾಷ್ಟ್ರೀಯ ಮುಖಂಡರುಗಳಾದ ರಾಕೇಶ್ ಟಿಕಾಯಿತ್ ರವರು ಮತ್ತು ಯದುವೀರ್ ಸಿಂಗ್ ರವರನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. jk

ಇಂದು ಬೆಂಗಳೂರಿನ ಆನಂದರಾವ್ ಸರ್ಕಾರದಲ್ಲಿರುವ ಗಾಂಧಿ ಪ್ರತಿಮೆಗೆ ಕೇಂದ್ರದ ರೈತ ನಾಯಕರುಗಳು ರಾಜ್ಯದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಜೊತೆಗೂಡಿ ಮಾಲಾರ್ಪಣೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಚರ್ಚಿಸಿ ನಂತರ ಅವರನ್ನು ಶಿವಮೊಗ್ಗಕ್ಕೆ ಬೀಳ್ಕೊಡಲಾಯಿತು

ರಾಕೇಶ್ ಟಿಕಾಯತ್ ಯದುವೀರ್ ಸಿಂಗ್  ದರ್ಶನ್ ಪಾಲ್ ಅವರನ್ನು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಸ್ವಾಗತಿಸಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.rakesh-tikayit-yadavir-singh-farmer-leader-arrived-state-welcome

ಶಿವಮೊಗ್ಗ ಕಿಸಾನ್ ಪಂಚಾಯತ್ ನಲ್ಲಿ ಭಾಗವಹಿಸಲು ಬೆಂಗಳೂರಿನಿಂದ ರ್ಯಾಲಿ ಮೂಲಕ ರಾಜ್ಯ ರೈತ ಮುಖಂಡರಾದ ಕುರುಬೂರು ಶಾಂತಕುಮಾರ್. ಚುಕ್ಕಿ  ನಂಜುಂಡಸ್ವಾಮಿ. ಬಡಗಲಪುರ ನಾಗೇಂದ್ರ ಕೋಡಿಹಳ್ಳಿ ಚಂದ್ರಶೇಖರ್ ತೆರಳಿದರು.

Key words: Rakesh Tikayit, – Yadavir Singh-farmer leader – arrived – state- Welcome