9 ಉಗ್ರನೆಲೆಗಳು ನಾಶ, 100 ಭಯೋತ್ಪಾದಕರು ನಿರ್ನಾಮ- ಆಪರೇಷನ್ ಸಿಂಧೂರ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾತು

ನವದೆಹಲಿ, ಜುಲೈ, 28,2025 (www.justkannada.in): ಆಪರೇಷನ್ ಸಿಂಧೂರ ಐತಿಹಾಸಿಕ ಮಿಲಿಟರಿ ಕ್ರಮವಾಗಿದ್ದು 9 ಉಗ್ರನೆಲೆಗಳು ನಾಶ ಮಾಡಲಾಗಿದೆ, 100 ಭಯೋತ್ಪಾದಕರನ್ನ ಹೊಡೆದುರುಳಿಸಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು.

ಆಪರೇಷನ್ ಸಿಂಧೂರ್ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದು ಈ ವೇಳೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್,  “ಪಹಲ್ಗಾಮ್ ದಾಳಿಯ ನಂತರ, ನಮ್ಮ ಸಶಸ್ತ್ರ ಪಡೆಗಳು ಕ್ರಮ ಕೈಗೊಂಡವು. 100ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ಟ್ರೈನಿಂಗ್ ಕ್ಯಾಂಪ್ ​ಗಳನ್ನು ಗುರಿಯಾಗಿಸಿಕೊಂಡಿದ್ದ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳ ಮೇಲೆ ನಿಖರವಾಗಿ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆ ವೇಳೆ ಎಸ್ -400, ಆಕಾಶ್ ಕ್ಷಿಪಣಿ ವ್ಯವಸ್ಥೆ, ವಾಯು ರಕ್ಷಣಾ ಬಂದೂಕುಗಳು ಬಹಳ ಉಪಯುಕ್ತವೆಂದು ಸಾಬೀತಾಯಿತು. ಪಾಕಿಸ್ತಾನದ ದಾಳಿಯನ್ನು ಇವುಗಳು ಸಂಪೂರ್ಣವಾಗಿ ವಿಫಲಗೊಳಿಸಿದವು” ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ  ನೆಲೆಗಳನ್ನ ನಾಶ ಮಾಡಲು ಭಾರತೀಯ ಸೇನೆ ಕೇವಲ ’22 ನಿಮಿಷಗಳು’ ತೆಗೆದುಕೊಂಡಿತು. ಗಡಿಗಳನ್ನು ರಕ್ಷಿಸಲು ಅವಿರತವಾಗಿ ಕೆಲಸ ಮಾಡುವ ಸೈನಿಕರಿಗೆ ಅವರು ಧನ್ಯವಾದಗಳು ಎಂದು ರಾಜನಾಥ್ ಸಿಂಗ್ ತಿಳಿಸಿದರು.

“ಆಪರೇಷನ್ ಸಿಂಧೂರ್” ಸಂದರ್ಭದಲ್ಲಿ ನಮ್ಮ ಕ್ರಮಗಳು ಸಂಪೂರ್ಣವಾಗಿ ಆತ್ಮರಕ್ಷಣೆಗಾಗಿಯೇ ಇದ್ದವು. ನಾವು ಉಗ್ರರ ನೆಲೆಗೆ ನುಗ್ಗಿ ಹೊಡೆದಿದ್ದೇವೆ.  22 ನಿಮಿದಲ್ಲಿ ಆಪರೇಷನ್ ಸಿಂಧೂರ ಮುಗಿಯಿತು. ಇದು ಪ್ರಚೋದನಕಾರಿ ಅಥವಾ ವಿಸ್ತರಣಾವಾದಿಯಾಗಿರಲಿಲ್ಲ. ಆದರೂ, ಮೇ 10, 2025ರಂದು, ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಪಾಕಿಸ್ತಾನವು ಕ್ಷಿಪಣಿಗಳು, ಡ್ರೋನ್‌ ಗಳು, ರಾಕೆಟ್‌ಗಳು ಮತ್ತು ಇತರ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರತದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಆ ದಾಳಿಯನ್ನು ತಡೆಯಲು ನಮ್ಮ ಸೇನೆ ಸಫಲವಾಯಿತು” ಎಂದು ರಾಜನಾಥ್ ಸಿಂಗ್ ಸಂಸತ್ ನಲ್ಲಿ ತಿಳಿಸಿದರು.vtu

Key words: Union Minister, Rajnath Singh , Operation Sindhur