ಸದನದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಪ್ರಸ್ತಾಪ: ಸರ್ಕಾರಕ್ಕೆ ಆರ್.ಅಶೋಕ್ ಚಾಟಿ

ಬೆಂಗಳೂರು,ಫೆಬ್ರವರಿ,2,2026 (www.justkannada.in):  ವಿಧಾನಮಂಡಲ ಅಧಿವೇಶನದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಈ ಸಂಬಂಧ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ ಆರ್.ಅಶೋಕ್, ಈ ಹಿಂದೆ ನೀವು 14 ಸಾವಿರ ಕೋಟಿ ರೂ. ಉಳಿಸಿಕೊಂಡಿದ್ರಿ. ಅದನ್ನು ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನು ತೀರಿಸಿದವು. ಸರ್ಕಾರಗಳು ಬದಲಾದಾಗ ಗುತ್ತಿಗೆದಾರರ ಬಿಲ್ ಬಾಕಿ ಇರುತ್ತೆ ಎಂದರು.

ಈ ಹಿಂದೆ ನಮ್ಮ ಸರ್ಕಾರದ ವಿರುದ್ದ  40% ಆರೋಪ ಮಾಡಿದ್ರಿ.  ಆಗ ನೀವು 40% ಕಮಿಷನ್ ಪೋಸ್ಟ್ ಹಾಕಿದ್ದೀರಿ  ಯಾವ ಗೋಡೇನೂ ಬಿಡದೇ ಅಂಟಿಸಿದ್ದೇ ಅಂಟಿಸಿದ್ದು.  ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆ ಶಿವಕುಮಾರ್,  ಸಿ‍ದ್ದರಾಮಯ್ಯ  ಡಿಕೆ ಶಿವಕುಮಾರ್ರನ್ನು ಜೋಡೆತ್ತು ಅಂತಿದ್ದರು.  ಈಗ ಕುಂಟೆತ್ತುಗಳಾಗಿವೆ ಎಂದು

ಇದೇ ವೇಳೆ ಮುಡಾ ಹಗರಣ ಬಗ್ಗೆಯೂ ಆರ್.ಅಶೋಕ್ ಪ್ರಸ್ತಾಪಿಸಿದರು. ಈ ವೇಳೆ  ಮಧ್ಯಪ್ರವೇಶಿಸಿದ ಸಚಿವ ಭೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.  ಮುಡಾ ಮುಡಾ ಅಂತ ಪಾದಯಾತ್ರೆ ಮಾಡಿದ್ರಿ ಈಗ ಹೇಳಿ ಏನಾಯಿತು.  ಎಲ್ಲಾ ಕೋರ್ಟ್ ಗಳಲ್ಲೂ ಆ ಪ್ರಕರಣ ಬಿದ್ದು ಹೋಯಿತು ಎಂದು ಭೈರತಿ ಸುರೇಶ್ ಟಾಂಗ್ ಕೊಟ್ಟರು.

Key words: pending, contractor, bills,  R. Ashok, Session