Saturday, August 15, 2026

BDA Apartments

Home Front Page ಶಾಸಕ ಭೈರತಿ ಬಸವರಾಜು ಬಂಧನ ರಾಜಕೀಯ ಪ್ರೇರಿತ, ಷಡ್ಯಂತ್ರ- ಆರ್.ಅಶೋಕ್

ಶಾಸಕ ಭೈರತಿ ಬಸವರಾಜು ಬಂಧನ ರಾಜಕೀಯ ಪ್ರೇರಿತ, ಷಡ್ಯಂತ್ರ- ಆರ್.ಅಶೋಕ್

ಚಿತ್ರದುರ್ಗ,ಫೆಬ್ರವರಿ,13,2026 (www.justkannada.in): ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು ಬಂಧನ ರಾಜಕೀಯ ಪ್ರೇರಿತ, ಷಡ್ಯಂತ್ರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಶಾಸಕ ಭೈರತಿ ಬಸವರಾಜ್ ಬಂಧನ ರಾಜಕೀಯ ಪ್ರೇರಿತ ಷಡ್ಯಂತ್ರ. ಯಾರು ದ್ವೇಷ ರಾಜಕಾರಣ ಮಾಡ್ತಾರೆ ಅವರು ಅನುಭವಿಸುತ್ತಾರೆ ಶಾಸಕ ಭೈರತಿ ಬಸವರಾಜು ಕಾನೂನಿಗೆ ಶರಣಾಗಿದ್ದಾರೆ. ನಾಳೆ ಭೈರತಿ ಬಸವರಾಜು ಮನೆಗೆ ಭೇಟಿ ನೀಡುವೆ ಎಂದರು.

ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್,  ಸಿದ್ದರಾಮಯ್ಯ ಕಡೆಯವರೇ ಶಾಸಕರನ್ನ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರಕ್ಕೆ ಸಾವಿರ ದಿನ ಹಿನ್ನೆಲೆ ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಯಾವ ಪುರುಷಾರ್ಥಕ್ಕೆ ಸರ್ಕಾರ ಕಾರ್ಯಕ್ರಮ ಮಾಡುತ್ತಿದೆ ಸಾವಿರ ದಿನಗಳು ಕರಾಳ ದಿನಗಳು ಯಾವ ಸಾಧನೆಗೆ ಕಾರ್ಯಕ್ರಮ ಮಾಡುತ್ತಿದ್ದಾರೆ.  ರೇಷನ್ ಕಾರ್ಡ್ ರದ್ದು ಬಗರ್ ಹುಕುಂ ಸಾಗುವಳಿ ಭೂಮಿ ಕೊಡಿತ್ತಿಲ್ಲ ಗುತ್ತಿಗೆದಾರರಿಂದ 80 % ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

Key words: MLA, Bhairathi Basavaraju, arrest , politically motivated, R. Ashok