ಇಂದು ಸಂಜೆ ‘ಪ್ರೊ.ಶಿವರಾಮ ಕಾಡನಕುಪ್ಪೆ ಒಂದು ನೆನಪು’ ಕಾರ್ಯಕ್ರಮ

ಮೈಸೂರು,ಅಕ್ಟೋಬರ್,28,2020(www.justkannada.in) : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮೈಸೂರು ಜಿಲ್ಲಾ ಘಟಕ ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಸಾಹಿತಿ, ಹೋರಾಟಗಾರ, ವಿಮರ್ಶಕ, ಚಿಂತಕ ಪ್ರೊ.ಶಿವರಾಮಕಾಡನಕುಪ್ಪೆ ಒಂದು ನೆನಪು ಕಾರ್ಯಕ್ರಮವನ್ನು ಕಲಾಮಂದಿರದ ಆವರಣದಲ್ಲಿರುವ ಚಿಂತಕರ ಚಾವಡಿಯಲ್ಲಿ ಆಯೋಜಿಸಲಾಗಿದೆ.jk-logo-justkannada-logo

ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಉದ್ಘಾಟನೆ ಮಾಡಲಿದ್ದು, ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಆರ್.ಜಯಕುಮಾರಿ ಅಧ್ಯಕ್ಷತೆವಹಿಸಲಿದ್ದಾರೆ. ಕಾಡನಕುಪ್ಪೆ ನೆನಪು ಕುರಿತು ಸಾಹಿತಿ ಡಾ.ಎಸ್.ತುಕರಾಂ, ಹಿರಿಯ ಲೇಖಕ ಡಿ.ಹೊಸಹಳ್ಳಿ ಶಿವು ಮಾತನಾಡಲಿದ್ದಾರೆ.Prof.Sivarama Kadanakuppe-memorial-event-4 pm-today

 

key words : Prof.Sivarama Kadanakuppe-memorial-event-4 pm-today