Sunday, September 20, 2026

BDA Apartments

ಪ್ರಧಾನಿ ಮೋದಿ ವಾರಾಣಾಸಿ ಪ್ರವಾಸ: ವೀರಶೈವ ಸಂಪ್ರದಾಯದ ಕೊಡುಗೆ ಸ್ಮರಣೆ BDA JK_Adv B...
Home Front Page ಪ್ರಧಾನಿ ಮೋದಿ ವಾರಾಣಾಸಿ ಪ್ರವಾಸ: ವೀರಶೈವ ಸಂಪ್ರದಾಯದ ಕೊಡುಗೆ ಸ್ಮರಣೆ

ಪ್ರಧಾನಿ ಮೋದಿ ವಾರಾಣಾಸಿ ಪ್ರವಾಸ: ವೀರಶೈವ ಸಂಪ್ರದಾಯದ ಕೊಡುಗೆ ಸ್ಮರಣೆ

ವಾರಾಣಾಸಿ, ಫೆಬ್ರವರಿ 16, 2020 (www.justkannada.in): ಎಲ್ಲರಿಗೂ ನಮಸ್ಕಾರ, ವೇದಿಕೆ ಮೇಲಿನ ವೀರಶೈವ ಲಿಂಗಾಯತ ಧರ್ಮದ ಪಂಚಪೀಠದ ಜಗದ್ಗುರುಗಳಿಗೆ ನಮಸ್ಕಾರಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲೆಂದು ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಭಾನುವಾರ ಭೇಟಿ ನೀಡಿರುವ ನರೇಂದ್ರ ಮೋದಿ, ಅಲ್ಲಿನ ಜಂಗಮವಾಡಿ ಮಠಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಭಾರತೀಯ ಭಕ್ತಿ ಪರಂಪರೆಗೆ ವೀರಶೈವ ಸಂಪ್ರದಾಯ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಅವರು, ಪವಿತ್ರ ಗ್ರಂಥ ‘ಸಿದ್ಧಾಂತ ಶಿಖಾಮಣಿ’ಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಂದರ್ಭ ಉಪಸ್ಥಿತರಿದ್ದರು.