Monday, August 3, 2026

BDA Apartments

Home Front Page ಪ್ರಧಾನಿ ಮೋದಿ ದೇಶದ್ರೋಹಿ ಹೇಳಿಕೆ ವಿಚಾರ: ನಜೀರ್ ಅಹ್ಮದ್ ವಿರುದ್ದ ಕ್ರಮಕ್ಕೆ CT ರವಿ ಆಗ್ರಹ

ಪ್ರಧಾನಿ ಮೋದಿ ದೇಶದ್ರೋಹಿ ಹೇಳಿಕೆ ವಿಚಾರ: ನಜೀರ್ ಅಹ್ಮದ್ ವಿರುದ್ದ ಕ್ರಮಕ್ಕೆ CT ರವಿ ಆಗ್ರಹ

ಬೆಂಗಳೂರು,ಫೆಬ್ರವರಿ,3,2026 (www.justkannada.in): ಪ್ರಧಾನಿ  ನರೇಂದ್ರ ಮೋದಿ ದೇಶದ್ರೋಹಿ ಎಂಬ  ಹೇಳಿಕೆ ನೀಡಿರುವ  ಸಿಎಂ ರಾಜಕೀಯ ಕಾರ್ಯದರ್ಶಿ , ಪರಿಷತ್ ಸದಸ್ಯ ನಜೀರ್ ಅಹ್ಮದ್  ವಿರುದ್ದ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್ ಸದಸ್ಯ  ಸಿಟಿ ರವಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಸದನದಲ್ಲಿ ನಜೀರ್ ವಿರುದ್ದ ಪ್ರತಿಭಟನೆಗೆ ಸಭೆ ಮಾಡುತ್ತೇವೆ.  ನಾವು ಇದನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಇಡೀ ಸದನ ಗಂಭೀರವಾಗಿ ತೆಗೆದುಕೊಳ್ಳಲಿದೆ.  ಪದೇ ಪದೇ ತಪ್ಪು ಮಾಡುವಂತಹ ಜನ ಇದ್ದಾರೆ.  ಇಂತವರಿಂದ ಮೇಲ್ಮನೆ ಗೌರವ ಉಳಿಯಲು ಸಾಧ್ಯವಿಲ್ಲ ಗೌರವ ಉಳಿಯಲು ಏನು ಮಾಡಬೇಕೋ ಮಾಡುತ್ತೇವೆ ಎಂದು ತಿಳಿಸಿದರು.

ವಿಧಾನಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಿದ್ದ ವೇಳೆ ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ್ರೋಹಿ ಎಂದು ಹೇಳಿ ವಿವಾದಕ್ಕೀಡಾಗಿದ್ದರು.

Key words: PM Modi, traitorous, statement, CT Ravi, demands, action, Nazir Ahmed