Tuesday, August 4, 2026

BDA Apartments

Home Front Page ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ: ಸಪ್ತಮಂದಿರಕ್ಕೆ ಭೇಟಿ, ಶೇಷಾವತಾರ ದೇಗುಲದಲ್ಲಿ ಪೂಜೆ

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ: ಸಪ್ತಮಂದಿರಕ್ಕೆ ಭೇಟಿ, ಶೇಷಾವತಾರ ದೇಗುಲದಲ್ಲಿ ಪೂಜೆ

ಅಯೋಧ್ಯೆ,ನವೆಂಬರ್,25,2025 (www.justkannada.in): ಅಯೋಧ್ಯೆಯಲ್ಲಿ ರಾಮಮಂದಿರ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಸರಿ ಧ್ವಜಾರೋಹಣ ಅದ್ದೂರಿ ಸಮಾರಂಭ ನಡೆಯುತ್ತಿದ್ದು ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣವವನ್ನ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮ ಜನ್ಮಭೂಮಿ ದೇವಾಲಯದ 161 ಅಡಿ ಎತ್ತರದ ಶಿಖರ (ಗೋಪುರ)ದ ಮೇಲೆ ಧ್ವಜಾರೋಹಣ ಮಾಡಲಿದ್ದಾರೆ. 22 ಅಡಿ ಉದ್ದ ಮತ್ತು 11 ಅಡಿ ಅಗಲವಿರುವ ಧ್ವಜವನ್ನು ರಾಮ ದೇವಾಲಯದ ಶಿಖರದ ಮೇಲೆ 42 ಅಡಿ ಎತ್ತರದ ಕಂಬದ ಮೇಲೆ ಹಾರಿಸಲಾಗುವುದು.

ಅಯೋಧ್ಯೆಯ ಸಪ್ತಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ  ನೀಡಿದ್ದಾರೆ.  ಹಾಗೆಯೇ ಶೇಷಾವತಾರ ದೇವಾಲಯದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ.  ಅಭಿಜಿತ್ ಶುಭ ಮುಹೂರ್ತದಲ್ಲಿ ಪ್ರಧಾನಿ ಮೋದಿ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

Key words: PM Modi, Ayodhya, Rama mandir