Thursday, September 17, 2026

BDA Apartments

ಲೋಕಸಭೆಯಲ್ಲಿ ವಿಪಕ್ಷಗಳಿಂದ ಗದ್ದಲ: ಕಲಾಪ ಮುಂದೂಡಿಕೆ BDA JK_Adv BDA Adv
Home Front Page ಲೋಕಸಭೆಯಲ್ಲಿ ವಿಪಕ್ಷಗಳಿಂದ ಗದ್ದಲ: ಕಲಾಪ ಮುಂದೂಡಿಕೆ

ಲೋಕಸಭೆಯಲ್ಲಿ ವಿಪಕ್ಷಗಳಿಂದ ಗದ್ದಲ: ಕಲಾಪ ಮುಂದೂಡಿಕೆ

ನವದೆಹಲಿ,ಜುಲೈ,21,2025 (www.justkannada.in) : ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಿದ್ದು, ಲೋಕಸಭೆ ಕಲಾಪ ಪ್ರಾರಂಭವಾಗುತ್ತದ್ದಂತೆ ವಿಪಕ್ಷಗಳಿಂದ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನ ಸ್ಪೀಕರ್ ಓಂ ಬಿರ್ಲಾ ಕೆಲಕಾಲ ಮುಂದೂಡಿದರು.

ಲೋಕಸಭೆ ಕಲಾಪದಲ್ಲಿ ವಿಪಕ್ಷಗಳು ಅಪರೇಷನ್ ಸಿಂಧೂರದ ಬಗ್ಗೆ ಪ್ರಸ್ತಾಪಿಸಿದವು.  ಪ್ರಶ್ನೋತರ ಕಲಾಪದ ವೇಳೆ ಗದ್ದಲ ಉಂಟಾಯಿತು. ಅಪರೇಷನ್  ಸಿಂಧೂರದ ಬಗ್ಗೆ ಚರ್ಚೆಗೆ ಅವಕಾಶ ನೀಡಿ ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದು. ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನ ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ ಮಾಡಿದರು.

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭಗೊಂಡಿದ್ದು. ಅಧಿವೇಶನವು ಆಗಸ್ಟ್​ 12ಕ್ಕೆ ಕೊನೆಗೊಳ್ಳಲಿದೆ. ಪಹಲ್ಗಾಮ್,  ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ.vtu

Key words:  Parliament, session, LokSabha, Adjournment