Thursday, August 13, 2026

BDA Apartments

Home Front Page ಓಣಂ ಹಬ್ಬ ಹಿನ್ನೆಲೆ: ಕೇರಳಾಗೆ ರಾಜ್ಯದಿಂದ ವಿಶೇಷ ಬಸ್ ಸಂಚಾರ….

ಓಣಂ ಹಬ್ಬ ಹಿನ್ನೆಲೆ: ಕೇರಳಾಗೆ ರಾಜ್ಯದಿಂದ ವಿಶೇಷ ಬಸ್ ಸಂಚಾರ….

ಮೈಸೂರು,ಆ,18,2020(www.justkannada.in): ಓಣಂ ಹಬ್ಬ ಹಿನ್ನೆಲೆ  ಒಂದು ವಾರಗಳ ಕಾಲ ಕೇರಳ ರಾಜ್ಯಕ್ಕೆ ಕರ್ನಾಟಕದಿಂದ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ಹಾಗೂ ಮೈಸೂರಿನಿಂದ ಕೇರಳಾ ರಾಜ್ಯಕ್ಕೆ  ಕೆಎಸ್ಆರ್ಟಿಸಿ ಬಸ್ ಗಳು ಸಂಚರಿಸಲಿವೆ. ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂ ಸೇರಿದಂತೆ ಇತರ ಸ್ಥಳಗಳಿಗೆ ವಿಶೇಷ ಬಸ್ ಸಂಚಾರ ವ್ಯವಸ್ಥೆ ಇರಲಿದ್ದು, ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಾಯಿಸಿದರಷ್ಟೇ ಈ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.onam-festival-special-bus-service-kerala

ಸೆಪ್ಟೆಂಬರ್ 24 ರಿಂದ ಆಗಸ್ಟ್ 6 ರವರೆಗೆ ವಿಶೇಷ ಕೆಎಸ್ಆರ್ ಟಿಸಿ ಬಸ್ ಸಂಚಾರ ಇರಲಿದ್ದು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು  ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿ ಹರಡುತ್ತಿದ್ದ ಹಿನ್ನೆಲೆ ಅಂತರಾಜ್ಯ ಸಾರಿಗೆ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಲಾಗಿತ್ತು. ನಂತರ ಅಂತರಾಜ್ಯ ಸೇವೆ ಪುನಾರಂಭಿಸಲಾಗಿದ್ದು ಇದೀಗ ಓಣಂ ಹಬ್ಬ ಹಿನ್ನೆಲೆ ಕೇರಳ ರಾಜ್ಯಕ್ಕೆ ಕರ್ನಾಟಕದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

Key words: Onam festival- Special bus- service – Kerala