ನನ್ನ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ…

ಬೆಂಗಳೂರು,ನ,1,2019(www.justkannada.in): ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರೂ ಒಟ್ಟಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದೇವೆಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ನನ್ನ ಮತ್ತು ಡಿಕೆಶಿ ಮಧ್ಯೆ  ಭಿನ್ನಾಭಿಪ್ರಾಯ ಇಲ್ಲ. ಪಕ್ಷಕ್ಕೆ ಧಕ್ಕೆ ಆಗುವಂತಹ ಭಿನ್ನಾಭಿಪ್ರಾಯ ಇಲ್ಲ. ವೀಕ್ಷಕರು ನೀಡಿದ ಶಿಫಾರಸ್ಸಿನ ಮೇಲೆ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ತಮ್ಮನ್ನ ಅಬ್ದುಲ್ ಸಿದ್ಧರಾಮಯ್ಯ ಎಂದು ಟೀಕಿಸಿದ್ದ ಸಚಿವ ಆರ್. ಅಶೋಕ್ ಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಮಿಸ್ಟರ್ ಅಶೋಕ್  ಟಿಪ್ಪು ಪೇಟಾ ಹಾಕಿ ಫೋಸ್ ಕೊಟ್ಟಿದ್ದು ಯಾರು. ಜಗದೀಶ್ ಶೆಟ್ಟರ್ ಬಿಎಸ್ ಯಡಿಯೂರಪ್ಪ ನೀವು ಟಿಪ್ಪು ಪೇಟಾ ಹಾಕಿರಲಿಲ್ವೆ..?  2013ರಲ್ಲಿ ನಾನೇ ಟಿಪ್ಪು ಎಂದು ಹೇಳಿದ್ದು ಯಾರು. ಬಿಎಸ್ ಯಡಿಯೂರಪ್ಪ ನಾನೇ ಟಿಪ್ಪು ಎಂದು ಹೇಳಿರಲಿಲ್ವೆ..?  ಟಿಪ್ಪು ಬಗ್ಗೆ ಗೋವಿಂದ ಕಾರಜೋಳ ಏನು ಬರೆದಿದ್ದರು. ಮಿಸ್ಟರ್ ಅಶೋಕ್ ಇದರ ಬಗ್ಗೆ ಮಾತನಾಡಪ್ಪ ಎಂದು ಗುಡುಗಿದರು.

Key words: no disagreement -between -me – DK Sivakumar- Former CM -Siddaramaiah