ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನೂರಕ್ಕೆ ನೂರು ಮತಾಂತರ ನಿಷೇಧ ಕಾಯ್ದೆ ವಾಪಸ್: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಮೈಸೂರು,ಡಿಸೆಂಬರ್,22,2021(www.justkannada.in): ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರು ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್ ಹೇಳಿದ್ದಿಷ್ಟು…

ಇದು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕಾಯ್ದೆ, ಈ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಒಪ್ಪುವುದಿಲ್ಲ. ಮುಂದೆ ಕಾಂಗ್ರೆಸ್ ಸರ್ಕಾರ ಬಂದ್ರೆ 100 ಕ್ಕೆ ನೂರ ಈ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ಕರ್ನಾಟಕ ಸರ್ಕಾರ ನೂತನ ಕಾಯ್ದೆಯ ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್.

ಮತಾಂತರ ನಿಷೇಧ ಕಾಯ್ದೆ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಗುಜರಾತ್ ನಲ್ಲಿ ಇದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಯಾವ ವ್ಯಕ್ತಿ ತನ್ನ ಇಚ್ಚೆಗೆ ಅನುಗುಣವಾಗಿ ಧರ್ಮ ಅನುಸರಿಸುವ ಅವಕಾಶ ನೀಡಿದೆ. ಇದರಿಂದ ಮತ್ತೊಂದು ಕಾಯ್ದೆ ಅವಶ್ಯಕತೆ ಇಲ್ಲ. ಸಂವಿಧಾನದ ಪರಿಚ್ಚೇದ 25ರ ಪ್ರಕಾರ ಇದಕ್ಕೆ ಗುಜರಾತ್ ನಲ್ಲಿ ತಡೆಯಾಜ್ಞೆ ನೀಡಿದೆ. ಈ ಕಾಯ್ದೆ ಗೆ ಕಾಂಗ್ರೆಸ್ ವಿರೊಧ ಇದೆ. ಈ ದೇಶ ಯಾವುದೇ ಒಂದು ಧರ್ಮ ಆಚರಣೆಗೆ ಸೀಮಿತವಾದ ರಾಷ್ಟ್ರ ಅಲ್ಲ. ಬಿಜೆಪಿ‌ ಜನಸಾಮಾನ್ಯರಿಗೆ ಕಿರುಕುಳ ನೀಡುವುದು. ಅಲ್ಪಸಂಖ್ಯಾತರನ್ನು, ಕ್ರಿಶ್ಚಿಯನ್ ಗುರಿಯಾಗಿರಿಸಿಕೊಂಡು ಈ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದರ ಉದ್ದೇಶ ರಾಜ್ಯದಲ್ಲಿ ಅಶಾಂತಿ ಉಂಟುಮಾಡಿ ಅವರ ವೈಪಲ್ಯ ಮುಚ್ವಿಕೊಳ್ಳುವುದು. ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಹುನ್ನಾರ ಇದು.

ಉತ್ತರ ಪ್ರದೇಶ, ಗುಜರಾತ್ ಕಾಯ್ದೆ ಗೂ ನಮ್ಮ ರಾಜ್ಯದಲ್ಲಿ ತರಲು ಹೊರಟಿರುವುದು ಬಹಳ ವ್ಯತ್ಯಾಸ ಇದೆ. ಮತಾಂತರ ಗೊಳ್ಳುವವರು ಅವರ ಸಂಬಂಧಿಕರ ಅನುಮತಿ ಪಡೆಯಬೇಕು. ಯಾರು ಬೇಕಾದ್ರು ಪ್ರಶ್ನೆ ಮಾಡಬಹುದು ಎಂಬ ಅಂಶ ಇದರಲ್ಲಿ ಇದೆ. ಇದು ಬಹಳ ಆತಂಕ ಸೃಷ್ಟಿ ಮಾಡುವಂತದ್ದು. ಈ ಹಿಂದೆ ಮತಾಂತರ ಆದವರು ಅರ್ಜಿ ಮೂಲಕ ಡಿಸಿ ಅವರಿಂದ ಸರ್ಟಿಫಿಕೇಟ್ ಪಡೆಯಬೇಕು ಎಂದು ಇದೆ. ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಕಿರುಕುಳ ನೀಡಲು ಹೀಗೆ ಮಾಡಿದೆ.

ಗೂಳಿಹಟ್ಟಿ ಶೇಖರ್ 15 ಸಾವಿರ ಜನರು ಮತಾಂತರ ಆಗಿದ್ದಾರೆ ಎಂದು ಸದನದಲ್ಲಿ  ಹೇಳ್ತಾರೆ. ಚಿತ್ರದುರ್ಗದಲ್ಲಿ ಸ್ವಯಂ ಪ್ರೇರಿತವಾಗಿ 45 ಕುಟುಂಬಗಳು ಕಾನೂನಾತ್ಮಕವಾಗಿ ಮಾತ್ರ ಕನ್ವರ್ಟ್ ಆಗಿದ್ದಾರೆ.‌  ಆದ್ರೆ ಗೂಳಿಹಟ್ಟಿ ಶೇಖರ್ 15 ಸಾವಿರ ಜನ ಅಂತ ಹೇಳಿದ್ದಾರೆ. ಇದಕ್ಕೆಲ್ಲ ಅವಕಾಶ ಕೊಟ್ಟವರು ಯಾರು…?

ಜನವರಿ 9 ರಿಂದ ಮೇಕದಾಟು ಸಂಬಂಧ ಪಾದಯಾತ್ರೆ

ಜನವರಿ 9 ರಿಂದ ಮೇಕದಾಟು ಸಂಬಂಧ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹಳೆ‌ಮೈಸೂರು ಭಾಗದಲ್ಲಿ ದೊಡ್ಡ ಆಂದೋಲನ‌ ಮಾಡುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಡಿ 23 ರಂದು ಡಿಕೆಶಿ ತಲಕಾವೇರಿಗೆ ಆಗಮಿಸಲಿದ್ದಾರೆ. 24 ರಂದು ತಲಕಾವೇರಿ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭವಾಗುತ್ತೆ. ಮೈಸೂರಿನಿಂದ ‌ಹೋಗುವುದು ಪ್ಲ್ಯಾನ್ ಇತ್ತು. ಸದನದಲ್ಲಿ ಸಿದ್ದರಾಮಯ್ಯ ಇರೋದ್ರಿಂದ ಪ್ರೋಗ್ರಾಂ ಕ್ಯಾನ್ಸಲ್ ಆಗಿದೆ. ಜನವರಿ ಮೊದಲ ವಾರದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಸಭೆ  ನಡೆಸಲಿದ್ದಾರೆ ಎಂದರು.

ಸಿಟಿ ರವಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕೆಂಡಾಮಂಡಲ.

ಸಿಟಿ ರವಿ ವಿರುದ್ಧ ಕೆಂಡಾಮಂಡಲರಾದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ನಿಮ್ಮ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಪಟ್ಟಿ ಮಾಡಿ ಹೇಳಿ ಸಿ ಟಿ ರವಿ. ನಿಮಗೆ ಮಾನ ಮರ್ಯಾದೆ ಇದ್ರೆ ಪಟ್ಟಿ ಕೊಡಿ. ಚಿಕ್ಕಮಗಳೂರಿನಲ್ಲಿ ಎರಡು ಕೆರೆ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಪಡೆಯುತ್ತಿದ್ದೀರಾ. ಕಳೆದ ವರ್ಷ 40 ಕೋಟಿ ಅನುದಾನ ಪಡೆದಿದ್ದೀರಿ. ಏನು ಅಭಿವೃದ್ಧಿ ಮಾಡಿದ್ದೀರಿ ತಿಳಿಸಿ. ಮಾಧ್ಯಮದ ಮುಂದೆ ಬರೆದೆ ಹೋದರೆ ನೀವು ಕಳೆದು ಹೋಗುತ್ತೀರಾ. ಕಾಂಟ್ರುವರ್ಸಿ ಸ್ಟೇಟ್ಮೆಂಟ್ ಗಳಿಂದ ಮಾತ್ರ ನಿಮ್ಮನ್ನ ರೆಕಗ್ನೈಜ್ ಮಾಡುವುದು. ಮೇಕೆದಾಟು ವಿಚಾರದಲ್ಲಿ ನಿಮ್ಮ‌ ನಿಲುವು ಏನು.

ತಮಿಳುನಾಡಿಗೆ ನೀವೇ  ಉಸ್ತುವಾರಿ ವಹಿಸಿಕೊಂಡಿದ್ದೀರಿ. ನಿಮ್ಮ‌ ನಿಲುವು ಏನು ಸ್ಪಷ್ಟಪಡಿಸಿ. ಅಣ್ಣಾಮಲೈ ಮೂಲಕ ನೀವೇ ಉಪವಾಸ ಸತ್ಯಾಗ್ರಹ ಮಾಡಿಸುತ್ತಿದ್ದೀರಿ. ನಾವು ಹಂಚಿಕೊಂಡು ತಿನ್ನುತ್ತೀವೆ ಅಂತೀರಿ, ಈಗಾಗಲೆ ಸುಪ್ರಿಂ ಕೋರ್ಟ್ ನೀರು ಹಂಚಿಕೆ ಮಾಡಿದೆ. ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಮೇಕೆದಾಟು ಯೋಜನೆ ಬಲಿ ಕೊಡುತ್ತಿದ್ದೀರಿ. ಬೆಂಗಳೂರು ಸೇರಿದಂತೆ ಹಲವು,ಜಲಾಶಯ ಪಟ್ಟಣಗಳಿಗೆ ಇದರಿಂದ ಅನುಕೂಲ ಆಗಲಿದೆ. ಇದು ನಿಮಗೆ ಇಷ್ಟ ಇಲ್ಲ. ನಿಮ್ಮ ರಾಜಕೀಯಕ್ಕೊಸ್ಕರ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ. ನಿಮ್ಮ ಮೋದಿ ಕರ್ನಾಟಕ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಿಮಗೆ ಮೇಕೆದಾಟು ಯೋಜನೆ ಮಾಡಲು ಕಷ್ಟ ಏನು.?ನಿಮ್ಮ ಯೋಗ್ಯತೆಗೆ ಒಂದು ಡ್ಯಾಂ ನಿಮ್ಮ ಮೋದಿ ನಿರ್ಮಾಣ ಮಾಡಿದ್ದಾರಾ ಹೇಳಿ.? ರಾಜಕೀಯ ಲಾಭಕ್ಕೆ ನಾವು ಚಳುವಳಿ ಮಾಡುತ್ತಿಲ್ಲ. ಮೇಕೆದಾಟು ಕಟ್ಟಬೇಕು ಎಂಬುದು ನಮ್ಮ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ನಡೆಯುತ್ತಿರುವ ಘಟನೆಗಳ ವಿಚಾರ. ಈ ಘಟನೆ ಕ್ರಿಯೇಟ್ ಮಾಡಿರೋದೇ  ಬಿಜೆಪಿಯವರು. ಜನತೆಯನ್ನು ದಿಕ್ಕು ತಪ್ಪಿ ಕಲ್ಲೊಡಿಸಿ, ಮಸಿ ಬಳಿಸುವ ಕೆಲಸ ಮಾಡಿಸಿರೋದು ಅವರೆ. ಮುಖ್ಯ ವಿಚಾರಗಳು ಚರ್ಚೆಗೆ ಬರಬಾರದು ಎಂಬ ಕಾರಣಕ್ಕೆ ಈ ಕೆಲಸ ಮಾಡಿದ್ದಾರೆ. ಅದಿವೇಶನದ ಪಾವಿತ್ರ್ಯತೆ ಕಳೆದವರು ಬಿಜೆಪಿ. ಕಾಂಗ್ರೆಸ್ ನವರು ಮಾಡಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ. ನಾವು ಮಾಡಿದ್ದರೆ ನಮ್ಮನ್ನ ಗಲ್ಲಿಗೇರಿಸಿ ಎಂದು ಲಕ್ಷ್ಮಣ್ ಹೇಳಿದರು.

Key words: Next-Congress -bans – Conversion Act-  KPCC -spokesperson -M Laxman