ನಾಳೆಯಿಂದ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ

ಚಾಮರಾಜನಗರ,ನವೆಂಬರ್,16,2020(www.justkannada.in) : ನಾಳೆಯಿಂದ ಮಲೆಮಹಾದೇಶ್ವರ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ.kannada-journalist-media-fourth-estate-under-loss

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರತೀ ವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ಮಹದೇಶ್ವರ ಜಾತ್ರೆ, ಮಹಾರಥೋತ್ಸವವಕ್ಕೆ ಈ ಬಾರಿ ಭಕ್ತರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿತ್ತು. ಕೇವಲ ಸ್ಥಳೀಯರು, ಪೂಜಾರಿಗಳ ಸಮ್ಮುಖದಲ್ಲಿ ಜಾತ್ರೆ ನಡೆಸಲಾಯಿತು.

ಇಂದು ನಡೆಯಬೇಕಿದ್ದ ಮಹಾರಥೋತ್ಸವವನ್ನು ರದ್ದು ಮಾಡಲಾಗಿದ್ದು, ಇಂದು ಸಂಜೆ ನಡೆಯು ಸರಳ ತೆಪ್ಪೋತ್ಸವದೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ. ನಾಳೆಯಿಂದ ಮಲೆಮಹಾದೇಶ್ವರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Opportunity-devotees-visit-Madhappa-tomorrow

key words : Opportunity-devotees-visit-Madhappa-tomorrow