ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ ರಾಮದಾಸ್ ಗುದ್ದಲಿ ಪೂಜೆ…

ಮೈಸೂರು,ಆ,18,2020(www.justkannada.in):  ಮೈಸೂರಿನ  ಜೆ.ಪಿ ನಗರ ವ್ಯಾಪ್ತಿಯ ಎರಡು ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಗುದ್ಧಲಿ ಪೂಜೆ ನೆರವೇರಿಸಿದರು.mysore-sa-ramdas-lay-foundation-road-development-works

ಜೆ ಪಿ ನಗರದ ನಾಚನಹಳ್ಳಿ ಪಾಳ್ಯದ ಮುಖ್ಯರಸ್ತೆ, ಕಾಮಾಕ್ಷಿ ಆಸ್ಪತ್ರೆಯ ಮುಂಭಾಗ ಮತ್ತು ಜೆ ಪಿ ನಗರದ ಅಂಬೇಡ್ಕರ್ ಮುಖ್ಯರಸ್ತೆ (ಕವಿತ ಬೇಕರಿ ರಸ್ತೆ)ಯು ಈ ಎರಡು ಮುಖ್ಯರಸ್ತೆ ಡಾಂಬರೀಕರಣ,ರಸ್ತೆ ಅಗಲೀಕರಣ,ಪುಟ್ ಪಾತ್,ಮಳೆನೀರು ಚರಂಡಿ ಕಾಮಗಾರಿಗೆ ಶಾಸಕ ಎಸ್.ಎ ರಾಮದಾಸ್ ಗುದ್ಧಲಿ ಪೂಜೆ ನೆರವೇರಿಸಿದರು.mysore-sa-ramdas-lay-foundation-road-development-works

ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡೀವೇಲು ,ಸಂಘ ಸಂಸ್ಥೆಯವರು ಮತ್ತು ಸ್ಥಳೀಯ ನಿವಾಸಿಗಳು, ಮುಖಂಡರು ಉಪಸ್ಥಿತರಿದ್ದರು.

Key words: mysore- SA Ramdas –lay –foundation- road- development works