ಕೋಮುಗಲಭೆ ಮಾಡಿಸುವುದು ಬಿಜೆಪಿ ಹುಟ್ಟುಗುಣ: ಅವರ ಕಾರ್ಯಕರ್ತರೇ ವೇಷ ಬದಲಿಸಿ ಕೃತ್ಯವೆಸಗುತ್ತಾರೆ-ಸಚಿವ ರಾಮಲಿಂಗರೆಡ್ಡಿ.

ಬೆಂಗಳೂರು,ಅಕ್ಟೋಬರ್,4,2023(www.justkannada.in):  ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್  ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ,  ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಕೋಮುಗಲಭೆ ಮಾಡಿಸುವುದು ಬಿಜೆಪಿ ಹುಟ್ಟುಗುಣ. ಬಿಜೆಪಿ ಕಾರ್ಯಕರ್ತರೇ ವೇಷ ಬದಲಿಸಿ ಕೃತ್ಯವೆಸಗುತ್ತಾರೆ. ಬಿಜೆಪಿಯವರು ಅಧಿಕಾರದಲ್ಲಿ ಇಲ್ಲದಿರುವಾಗ ತಂದಿಡುವ ಕೆಲಸ ಮಾಡುತ್ತಾರೆ . ನೈತಿಕ ಪೊಲೀಸ್ ಗಿರಿ ಮಾಡಿಸುವುದು ಬಿಜೆಪಿ ಕೆಲಸ.  ಬಿಜೆಪಿ ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡುತ್ತೆ. ಹುಟ್ಟುಗುಣ ರಕ್ತದಲ್ಲೇ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Key words: nature – BJP – create- communal riots – Minister -Ramalinga Reddy.