ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹ: ಹೋರಾಟಕ್ಕೆ ಕೈ ಜೋಡಿಸಲು ‘ನಮ್ಮ ನಾಡು-ನಮ್ಮ ಆಳ್ವಿಕೆ’ ಮನವಿ

ಮೈಸೂರು,ಜುಲೈ,17,2025 (www.justkannada.in): ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ನಮ್ಮ ನಾಡು-ನಮ್ಮ ಆಳ್ವಿಕೆ ವೇದಿಕೆಯು, ತಮ್ಮ  ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದೆ.

ದ್ವಿಭಾಷಾ ನೀತಿ ಜಾರಿಗೆ ಒತ್ತಾಯಿಸಿ ಸಹಿ ಸಂಗ್ರಹ ನಡೆಸುತ್ತಿರುವ ನಮ್ಮ ನಾಡು-ನಮ್ಮ ಆಳ್ವಿಕೆ ವೇದಿಕೆಯು, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಹೋರಾಟ ಇದೀಗ  ನಿರ್ಣಾಯಕ ಹಂತ ತಲುಪಿದೆ. ಈ ಕುರಿತ ನಮ್ಮ ಪಿಟಿಶನ್ ಗೆ ಈಗಾಗಲೇ 47 ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲಿಸಿದ್ದಾರೆ. ಸದ್ಯದಲ್ಲೇ ಈ ಪಿಟಿಷನನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಆದ್ದರಿಂದ ಇದೀಗ ‘ಸ್ಲಾಗ್ ಓವರ್’ ಮಾದರಿಯಲ್ಲಿ ಕೊನೆಹಂತದಲ್ಲಿ ಆದಷ್ಟು ಹೆಚ್ಚು ಸಹಿ ಮಾಡಿಸುವ ಯೋಜನೆ ನಮ್ಮದು. ಇನ್ನೂ ಸಹಿ ಮಾಡದವರು ಈ ಕೂಡಲೇ ಸಹಿ ಮಾಡಿ ಎಂದು ಮನವಿ ಮಾಡಿದೆ.

ಅಲ್ಲದೆ ಈಗಾಗಲೇ ಸಹಿ ಮಾಡಿದ/ ಮಾಡದ ಎಲ್ಲಾ ಕನ್ನಡಪರರು  ಪೋಸ್ಟ್ ಅನ್ನು ಪೂರ್ತಿಯಾಗಿ  copy ಮಾಡಿ (ಶೇರ್ ಮಾಡುವುದು ಬೇಡ, ರೀಚ್ ಕಡಿಮೆ) ನೇರವಾಗಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಸಹಿ ಮಾಡಲು ಆಗ್ರಹಿಸುವ ಮೂಲಕ ಹೋರಾಟದಲ್ಲಿ ಕೈ ಜೋಡಿಸುವಂತೆ ಕೋರಿದೆ.

chng.it/SSs5VjJnC4   ಈ ಲಿಂಕ್ ಮೂಲಕ ಸಹಿ ಮಾಡಿ, ಸಹಿ ಮಾಡಿಸಿ..vtu

key words: implementation, bilingual policy, state, Namma Naadu, Namma Alvike