ಮೈಸೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ: ಬಾವನನ್ನೇ ಕೊಂದು ಕೈಕತ್ತರಿಸಿ ಪೊಲೀಸ್ ಠಾಣೆಗೆ ತಂದ ಬಾಮೈದ.

ಮೈಸೂರು,ಆಗಸ್ಟ್,15,2021(www.justkannada.in): ಬಾವನನ್ನೇ ಬಾಮೈದನೊಬ್ಬ ಕೊಂದು ಕೈ ಕತ್ತರಿಸಿ ಆ ಕೈಗಳನ್ನ ಪೊಲೀಸ್ ಠಾಣೆಗೆ ತಂದು ಶರಣಾಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗೌಸಿಯಾನಗರದಲ್ಲಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಮಹಮದ್ ಸರಾನ್ (27) ಕೊಲೆಯಾದ ವ್ಯಕ್ತಿ. ಕಳೆದ ಐದು ತಿಂಗಳ ಹಿಂದೆಯಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಮದುವೆಯಾಗಿದ್ದರು. ಈ ಮಧ್ಯೆ ಇಬ್ಬರ ನಡುವೆ ಕೌಟುಂಬಿಕ ಕಲಹ, ಜಗಳ ಉಂಟಾಗಿದೆ. ಗಂಡ ಹೆಂಡತಿಯ ಜಗಳಕ್ಕೆ ರೂಬೀನಾ ಪೋಷಕರು ಎಂಟ್ರಿ ಕೊಟ್ಟಿದ್ದಾರೆ.

ಈ ನಡುವೆ ರೂಬೀನಾ ಸಂಬಂಧಿಕರು ಸರಾನ್  ಕೊಲೆ ಮಾಡಿ ಕೈ ಕತ್ತರಿಸಿ ವಿಕೃತಿ ಮೆರೆದಿರುವ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಕೈಗಳನ್ನ ಕತ್ತರಿಸಿ ಬಾಮೈದ ಕದೀರ್  ಉದಯಗಿರಿ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ ಎನ್ನಲಾಗಿದೆ. ಈ ಕುರಿತು  ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- murder- Bamaida –cut- hand – police station.