Wednesday, August 5, 2026

BDA Apartments

Home Front Page ಅ.10 ರಂದು ಮೈಸೂರಿನ ಐಶ್(AIISH)ನಲ್ಲಿ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ ಅವರೊಂದಿಗೆ ಸಂವಾದ ಕಾರ್ಯಕ್ರಮ.

ಅ.10 ರಂದು ಮೈಸೂರಿನ ಐಶ್(AIISH)ನಲ್ಲಿ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ ಅವರೊಂದಿಗೆ ಸಂವಾದ ಕಾರ್ಯಕ್ರಮ.

ಮೈಸೂರು,ಅಕ್ಟೋಬರ್,7,2022(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ಅಕ್ಟೋಬರ್ 10 ರಂದು ‘ಪರಿಸರ ಹಾಗೂ ಅದರ ಸಂರಕ್ಷಣೆ’ ಕುರಿತು ಪದ್ಮ ಶ್ರೀ ನಾಡೋಜ, ಡಾ. ಸಾಲುಮರದ ತಿಮ್ಮಕ್ಕ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನ ಆಯೋಜಿಸಿದೆ.

ಸಂಸ್ಥೆಯ ಎನ್‌ಎಸ್‌ಎಸ್‌ ಘಟಕವು  ಅಂದು ಬೆಳಿಗ್ಗೆ  10ರಿಂದ 11ರವರೆಗೆ ಸಂಸ್ಥೆಯ ಶೈಕ್ಷಣಿಕ ವಿಭಾಗದ ವಿಚಾರಸಂಕಿರಣ ಸಭಾಂಗಣದಲ್ಲಿ ಈ ಸಂವಾದ ಕಾರ್ಯಕ್ರಮವನ್ನ ಆಯೋಜನೆಗೊಳಿಸಿದೆ.  ಡಾ. ಸಾಲುಮರದ ತಿಮ್ಮಕ್ಕ ಅವರೊಂದಿಗೆ  ‘ಪರಿಸರ ಹಾಗೂ ಅದರ ಸಂರಕ್ಷಣೆ’ ಕುರಿತು ನಡೆಯುವ ಸಂವಾದದಲ್ಲಿ ಎನ್ ಎಸ್ ಎಸ್ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ. ನಂತರ ಸಂಸ್ಥೆಯ ಕ್ಯಾಂಪಸ್‌ ನಲ್ಲಿ ಸಾಲುಮರದ ತಿಮ್ಮಕ್ಕ ಅವರಿಂದ ಗಿಡ ನೆಡುವ ಕಾರ್ಯಕ್ರಮವಿರುತ್ತದೆ.

ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದಡಿಯಲ್ಲಿ 1965ರಲ್ಲಿ ಸ್ಥಾಪನೆಗೊಂಡಿತು. ಸಂವಹನ ನ್ಯೂನತೆ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ವೃತ್ತಿಪರ ತರಬೇತಿ ನೀಡುವುದು, ಚಿಕಿತ್ಸಾ ಸೇವೆಗಳನ್ನು ಒದಗಿಸುವುದು, ಸಂಶೋಧನೆ ಕೈಗೊಳ್ಳುವುದು ಮತ್ತು ಶ್ರವಣ ನ್ಯೂನತೆ, ಬುದ್ಧಿಮಾಂದ್ಯತೆ, ಧ್ವನಿ ಹಾಗೂ ಮಾತಿನ ನಿರರ್ಗಳತೆ ಹಾಗೂ ಧ್ವನಿವಿಜ್ಞಾನ ಮತ್ತು ಭಾಷಾನ್ಯೂನತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿವೆ.

ಸಂಸ್ಥೆಯು ಇತ್ತೀಚೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು ಸಂವಹನ ನ್ಯೂನತೆಗಳ ಬಗ್ಗೆ ಸಮಗ್ರ ಸಂಶೋದನೆಯನ್ನು ಕೈಗೊಳ್ಳುವ ಸಲುವಾಗಿ ಶ್ರೇಷ್ಟ ಕೇಂದ್ರವನ್ನು ಸ್ಥಾಪಿಸಿದೆ.  ಕೇಂದ್ರವು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿದೆ.

Key words: Mysore-AIISH-Conversation -with –Salumarada Thimmakka