ಬಹುಭಾಷ ಹಿರಿಯ ಕಲಾವಿದನ ಆರೋಗ್ಯ ಚೇತರಿಕೆಗೆ ನೆರವಾಗುವಂತೆ ಮನವಿ

ಬೆಂಗಳೂರು,ಸೆಪ್ಟೆಂಬರ್,13,2020(www.justkannada.in)  : ಸಾವು-ಬದುಕಿನ ಜೊತೆ ಸೆಣಸಾಡುತ್ತಿರುವ ಬಹು ಭಾಷ ಕಲಾವಿದ ಕನ್ನಡ ನಟ-ವಿಶ್ವನಾಥ್ ಅನಾರೋಗ್ಯದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಹಾಯ ಹಸ್ತ ಚಾಚಬೇಕಿದೆ.

jk-logo-justkannada-logo

ಪುಟ್ಟಣ್ಣ ಕಣಗಾಲ್ ಅವರ ಪಡುವಾರಹಳ್ಳಿ ಪಾಂಡವರು ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ವಿಶ್ವನಾಥ್ ಬೆಳಕಿಗೆ ಬಂದರು. ಬಳಿಕ ಡಾ.ರಾಜ್‌ಕುಮಾರ್ ನಟಿಸಿದ ಚಲಿಸುವ ಮೊಡಗಳು ಆದಿಯಾಗಿ ಐದು ಸಿನಿಮಾಗಳಲ್ಲಿ ಡಾ,ರಾಜ್‌ಕುಮಾರ್ ಎದುರು ಸರಿಸಮನಾಗಿ ನಟಿಸಿ ರಾಜಕುಮಾರ್ ಅವರಿಂದಲೇ ಮೆಚ್ಚುಗೆ ಪಡೆದವರಾಗಿದ್ದಾರೆ.

ಇಷ್ಟು ಮಾತ್ರವಲ್ಲದೇ, ತಮಿಳಿನಲ್ಲಿ ಕೆ.ಬಾಲಚಂದ್ರ ಅವರ ಸಿನಿಮಾಗಳಲ್ಲಿ ನಟಿಸಿ ನಂತರ ತೆಲುಗು ಮತ್ತು ಹಿಂದಿಯ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಮೊದಲ ತೆಲುಗು ನಿರ್ದೇಶನದ ನಾಗಾರ್ಜುನ ನಟಿಸಿ ಭಾರಿ ಯಶಸ್ಸುಗೊಂಡ ‘ಶಿವ’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.

multilingual-veteran-artist-Appeal-aid-health-recovery

ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿ, ಬಳಿಕ ಮತ್ತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಎಚ್.ಡಿ .ಕುಮಾರಸ್ವಾಮಿ ನಿರ್ಮಾಪಕರಾಗಿದ್ದ ಜಗ್ಗೇಶ್ ಅಭಿನಯದ ‘ಜಿತೇಂದ್ರ’ ಸಿನಿಮಾವನ್ನ ವಿಶ್ವನಾಥ್ ನಿರ್ದೇಶನ ಮಾಡಿದ್ದರು. ಪುನೀತ್ ರಾಜ್ ಕುಮಾರ್ ನಟಿಸಿದ ‘ವಂಶಿ’ ಚಿತ್ರದಲ್ಲಿಯು ಕೂಡ ನಟಿಸಿದ್ದು, ಬಳಿಕ ಅವಕಾಶಗಳಿಲ್ಲದೆ ಖಾಲಿ ಉಳಿಯುವಂತ್ತಾಗಿತ್ತು. ವಿಶ್ವನಾಥ್ ಕಳೆದ ವರ್ಷವಷ್ಟೆ ‘ಸಹಿಷ್ಣು’ ಎಂಬ ಪ್ರಯೊಗಾತ್ಮಕ ಸಿನಿಮಾದಲ್ಲಿ ನಟಿಸಿದ್ದರು ಎಂದು ತಿಳಿದುಬಂದಿದೆ.

ಶುಗರ್ ಖಾಯಿಲೆಗೆ ತುತ್ತಾಗಿ, ಆಪರೇಷನ್ ಆಗಿದೆ 

ಪ್ರಸ್ತುತ ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು, ಕಾಲಿನ ಆಪರೇಷನ್ ಕೂಡ ಇತ್ತಿಚೆಗೆ ಆಗಿದೆ. ವಿಜಯನಗರದ ಪೈಪ್‌ಲೈನ್ ರಸ್ತೆಯಲ್ಲಿರುವ ಬಿ.ಜಿ.ಎಸ್ ,ಆಸ್ಪತ್ರೆಯಲ್ಲಿ ಸುಮಾರು ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ,ಆಸ್ಪತ್ರೆಯ ಚಿಕಿತ್ಸೆಗೆ ಸಾಕಷ್ಟು ಹಣದ ಅಗತ್ಯತೆವಿದೆ.

ನಟರು ಹಾಗೂ ಕಲಾಪೋಷಕರಿಂದ ಸಹಾಯಕ್ಕೆ ಮನವಿ  

ಕನ್ನಡಚಿತ್ರರಂಗದ ನಟರು ಹಾಗೂ ಕನ್ನಡದ ಪ್ರೇಕ್ಷಕರಿಂದ ಸಹಾಯ ಮಾಡುವಂತೆ ಕೋರುತ್ತಿದ್ದಾರೆ.  ಕನ್ನಡ ಚಿತ್ರರಂಗದ ಸಹೃದಯರು ಮತ್ತು ದಾನಿಗಳು ಸಹಾಯಮಾಡಬೇಕಾಗಿ ವಿನಂತಿಸುತ್ತಿದ್ದಾರೆ. ಹಿರಿಯ ಕಲಾವಿದರಾದ ವಿಶ್ವನಾಥ್ ರಿಗೆ ಸಹಾಯ ಮಾಡಲಿಚ್ಚಿಸುವವರು ವಿಶ್ವನಾಥ್‌ ಅವರ ಖಾತೆ ವಿವರ (ಕೆ.ವಿಶ್ವನಾಥ್ a/c no: 0442010062749, ifsc code :0000440) ಆಸಕ್ತರು ಸಹಾಯ ಮಾಡಬಹುದು.

key words :multilingual-veteran-artist-Appeal-aid-health-recovery