ಜನರು ಕೊಡುವ ದುಡ್ಡಲ್ಲಿ ಸರ್ಕಾರದಿಂದ ಭ್ರಷ್ಟಾಚಾರ- ಸಂಸದ ಬಸವರಾಜ ಬೊಮ್ಮಾಯಿ

ಬೆಂಗಳೂರು,ಜೂನ್,25,2025 (www.justkannada.in): ಜನರು ಕೊಡುವ ದುಡ್ಡಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಶಾಸಕರಿಗೆ ಅನುದಾನ ಇಲ್ಲದೆ ಎರಡುವರೆ ವರ್ಷ ಆಯಿತು. ಜನ ಭ್ರಷ್ಟಾಚಾರಕ್ಕೆ ತಮ್ಮ ದುಡಿಮೆ ಹಣ ಕೊಡುವ ಸ್ಥಿತಿ ಬಂದಿದೆ. ರಾಜ್ಯದ ಜನರು ಕೊಡುವ ದುಡ್ಡಿನಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.  ಬಡವರು ಕುಡಿಯುವ ಮದ್ಯಕ್ಕೂ ತೆರಿಗೆ ಹಾಕಿದ್ದಾರೆ.  ಕಾಂಗ್ರೆಸ್ ವಿಪಕ್ಷದಲ್ಲಿದ್ದಾಗ ಬಹಳ ದೊಡ್ಡ ಹಂಗಾಮ ಮಾಡಿದ್ದರು.  ಹೆಚ್. ಕೆ ಪಾಟೀಲ್ ಸಂಫುಟದಲ್ಲಿ ಚರ್ಚೆ ಬಿಟ್ಟು ಸಿಎಂಗೆ ಪತ್ರ ಬರೆಯತ್ತಾರೆ.  ಸಾಮಾನ್ಯವಾಗಿ ವಿರಧ ಪಕ್ಷದವರು ಪತ್ರ ಬರೆಯುತ್ತಾರೆ. ಹಗರಣಗಳ ವಿರುದ್ದ ನಾವು ಹೋರಾಟ ಮಾಡುತ್ತೇವೆ. ವಿಷಯವಾರು ಹೋರಾಟ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ಇನ್ನು ರಾಜ್ಯದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಬಿಎಸ್ ವೈ ಒಂದು ಶಕ್ತಿ ಇದ್ದಂತೆ.  ಅವರು ಪ್ರವಾಸ ಮಾಡಿದಾಗಲೆಲ್ಲ ಒಂದು ಸ್ಪೂರ್ತಿ ಸಿಗುತ್ತೆ. ಈ ಬಾರಿ ಬಿಎಸ್ ವೈ ಸ್ವಯಂ ಪ್ರೇರಿತರಾಗಿ ಪ್ರವಾಸ ಮಾಡುತ್ತಿದ್ದಾರೆ ಎಂದರು.vtu

Key words: Corruption, government, money, people, MP, Basavaraj Bommai