Saturday, September 12, 2026

BDA Apartments

Home Front Page ರಾಜ್ಯಕ್ಕೆ ಹೆಚ್ಚಿನ ಕಂಪನಿಗಳ ಪ್ರವೇಶ, ಕೈಗಾರಿಕಾ ನೀತಿಗಳಲ್ಲಿ ಸಡಿಲ : ಸಚಿವ ಶಿವರಾಮ ಹೆಬ್ಬಾರ್

ರಾಜ್ಯಕ್ಕೆ ಹೆಚ್ಚಿನ ಕಂಪನಿಗಳ ಪ್ರವೇಶ, ಕೈಗಾರಿಕಾ ನೀತಿಗಳಲ್ಲಿ ಸಡಿಲ : ಸಚಿವ ಶಿವರಾಮ ಹೆಬ್ಬಾರ್

ಕೋಲಾರ,ಡಿಸೆಂಬರ್,28,2020(www.justkannada.in) : ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲು ಸೂಕ್ತ ವಾತಾವರಣವಿದ್ದು, ರಾಜ್ಯಕ್ಕೆ ಹೆಚ್ಚಿನ ಕಂಪನಿಗಳು ಪ್ರವೇಶಿಸಲು ಕೈಗಾರಿಕಾ ನೀತಿಗಳನ್ನು ಸಡಲಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಂಧಲೆ ಹಿನ್ನೆಲೆಯಲ್ಲಿ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು,  ರಾಜ್ಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸರಕಾರ ಕ್ರಮಕೈಗೊಂಡಿದೆ ಎಂದರು.

ನರಸಾಪುರದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಕಾರ್ಮಿಕರ ದಾಂಧಂಲೆ ಪ್ರಕರಣಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಕಂಪನಿಯಲ್ಲಿ ದಾಂಧಲೆ ನಡೆಯಲು ಕಾರಣವೇನು? ಕಂಪನಿಯಲ್ಲಿ ಆಗಿರುವ ಲೋಪಗಳೇನು? ಎಂಬುದನ್ನು ತಿಳಿಯಲು ಕಂಪನಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ.

More,state,Access,Companies,Industrial,Loosen,policies,Minister,Sivarama Hebbar

ಆದರೆ, ಘಟನೆ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ, ಮುಂದಿನವಾರ ವಿಕಾಸ ಸೌಧದಲ್ಲಿ ಕಂಪನಿ ಆಡಳಿತ ಮಂಡಳಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

key words : More-state-Access-Companies-Industrial-Loosen-policies-Minister-Sivarama Hebbar