ಜಾತಿಗಣತಿ  ಅನುಷ್ಟಾನಕ್ಕೆ ಬರದಂತೆ ಪ್ರಬಲ ವರ್ಗದವರು ತಡೆದಿದ್ದಾರೆ-ಯತೀಂದ್ರ ಸಿದ್ದರಾಮಯ್ಯ

ಮಂಡ್ಯ,ಜೂನ್,16,2025 (www.justkannada.in): ಜಾತಿಗಣತಿ ವರದಿ ಅನುಷ್ಟಾನಕ್ಕೆ ಬಂದಿದ್ದರೆ ಹಿಂದುಳಿದ ವರ್ಗಕ್ಕೆ ಶಕ್ತಿ ಬರುತ್ತಿತ್ತು. ಆದರೆ ಜಾತಿಗಣತಿ ಜಾರಿಗೆ ಬರದಂತೆ ಪ್ರಬಲ ವರ್ಗದವರು ತಡೆದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಜಾರಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚುತ್ತಿತ್ತು. ಆದರೆ ಕೆಲವರು ಪ್ರಬಲವಾಗಿ ವಿರೋಧ ಮಾಡಿದ್ದರಿಂದ ಅನುಷ್ಟಾನ ಆಗಲಿಲ  ಜನಸಂಖ್ಯೆ ಹೆಸರಿನಲ್ಲಿ ಜಾತಿಗಣತಿ ಅನುಷ್ಟಾನಕ್ಕೆ ಬರದಂತೆ ಪ್ರಬಲ ವರ್ಗವದವರು ಮಾಡಿದ್ದಾರೆ ಎಂದರು.

ಹಿಂದುಳಿದವರು ಶೇ 50ಕ್ಕಿಂತ ಹೆಚ್ಚಿದ್ದಾರೆ.  ಜಾತಿಗಣತಿ ಜಾರಿಯಾಗಿದ್ದರೆ ಒಕ್ಕಲಿಗ ಲಿಂಗಾಯಿತರಿಗೂ ಮೀಸಲಾತಿ ಹೆಚ್ಚಳವಾಗುತ್ತಿತ್ತು.  ಮೇಲ್ವರ್ಗದರ ಮೀಸಲಾತಿ ಹೆಚ್ಚಿಸಬೇಕಾದರೆ ವಿರೋಧ ವ್ಯಕ್ತಪಡಿಲಿಲ್ಲ ಆದ್ರೆ ಹಿಂದುಳಿದವರ ಮೀಸಲಾತಿ ಹೆಚ್ಚಿಸಬೇಕಾದರೆ ಅಡೆತಡೆ ಬರುತ್ತೆ ಎಂದು ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.vtu

Key words: Powerful classes, caste census, MLC, Yathindra Siddaramaiah