ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಮಿಸ್ ಗೈಡೆಡ್ ಲೀಡರ್- MLC  ಸಿ.ಟಿ ರವಿ

ಚಿಕ್ಕಮಗಳೂರು,ಆಗಸ್ಟ್,8,2025 (www.justkannada.in):  ರಾಜ್ಯದಲ್ಲಿ ಬೆಂಗಳೂರು ಕೇಂದ್ರ ಲೋಕಸಸಭಾ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ.

ಈ ಕುರಿತು ಮಾತನಾಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಮಿಸ್ ಗೈಡೆಡ್ ಲೀಟರ್ . ರಾಹುಲ್ ಗಾಂಧಿ ಅವರ  ರಿಮೋಟ್ ಎಲ್ಲೋ ಇದೆ. ಆ ರಿಮೋಟಿಗೆ ತಕ್ಕಂತೆ ಇಲ್ಲಿ ಕೆಲಸ  ಮಾಡುತ್ತಿದ್ದಾರೆ. ಸುಳ್ಳರು ಕಳ್ಳರು ಜಾಸ್ತಿ ಸೌಂಡ್ ಮಾಡುತ್ತಾರೆ  ಎಂದು ಟಾಂಗ್ ಕೊಟ್ಟರು.

ಮತಗಳ್ಳತನದ ಬಗ್ಗೆ ಆರೋಪ ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿಗೋಷ್ಠಿ ನಡೆಸಿ ಸಾಕ್ಷಿ ಬಿಡುಗಡೆ ಮಾಡಿದ್ದರು.

Key words: Congress leader, Rahul Gandhi , misguided leader, MLC, C.T. Ravi