ಮೈಸೂರು, ಅಕ್ಟೋಭಬರ,13,2025 (wwwjustkannada.i): ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್ ಶಾಸಕ ಶ್ರೀವತ್ಸ ವಾಗ್ದಾಳಿ ನಡೆದಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಶ್ರೀವತ್ಸ, ಮೂರ್ಖತನದ ಪರಮಾವಧಿ ಇದು. ನಾವೇನು ಕದ್ದು ಮುಚ್ಚಿ ಶಾಖೆ ನಡೆಸುತ್ತಿಲ್ಲ.ಬನ್ನಿ ನಮ್ಮ ಜೊತೆ ಕೂರಿ. ಆರ್.ಎಸ್.ಎಸ್ ಹೇಗೆ ಕೆಲಸ ಮಾಡತ್ತಿದೆ ನೋಡಿ ದೊಣ್ಣೆ ಹಿಡಿದುಕೊಂಡು ನಮ್ಮ ಆತ್ಮ ರಕ್ಷಣೆ ಹೇಗೆ ಮಾಡಿಕೊಳ್ಳೋದು ಅಂತ ಕರೀತಾರೆ. ಸಿದ್ದರಾಮಯ್ಯ ಡಿಕೆಶಿ ನಡುವೆ ವಾರ್ ನಡೀತಿದೆ ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡ್ತಾರೆ ಅಂತ ಇತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ನಾನೇ ಸಿಎಂ ಅಂತ ಬಿಂಬಿಸಿಕೊಳ್ಳಲು ನೋಡುತ್ತಿದ್ದಾರೆ . ನಿಮ್ಮ ಅಧಿಕಾರ ಕೇವಲ ಇನ್ನೂ ಎರಡೂವರೆ ವರ್ಷ ಅಷ್ಟೇ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದರು.
ನಾವು ಸದನಕ್ಕೆ ಅದೇ ಡ್ರೆಸ್ ನಲ್ಲಿ ಬರ್ತೀವಿ ಏನು ಮಾಡ್ತೀರಾ? ನಾವು ಅಂಬೇಡ್ಕರ್ ವಿಚಾರಧಾರೆ ಅಳವಡಿಸಿಕೊಂಡು ಶಾಖೆ ನಡೆಸುತ್ತಿದ್ದೇವೆ. ಮಕ್ಕಳಿಗೆ ಚರಿತ್ರೆ ಹೇಳಿ ಕೊಡುವ ಕೆಲ್ಸ ನಾವು ಮಾಡ್ತಿದ್ದೇವೆ. ಡಿಕೆಶಿ ಅಂದು ಸದನದಲ್ಲಿ ನಮಸ್ತೆ ಸದಾ ವತ್ಸಲೆ ಅಂತ ಹೇಳಿದ್ದರುಅದನ್ನು ಮುಚ್ಚಿಕೊಳ್ಳಲು ನಿನ್ನೆ ಕರಿಟೋಪಿ ಅಂತಿದ್ದಾರೆ. ಯಾರು ಏನು ಹೇಳಿದ್ರು ನಾವು ತಲೆ ಕೆಡಿಸಿಕೊಳ್ಳಲ್ಲ. ಡಿಕೆಶಿ ಹೇಳಿಕೆಯನ್ನು ಎಲ್ಲರೂ ನೋಡುತ್ತಿದ್ದಾರೆ. ನಾನು ಕೂಡ ಸಂಘದ ಒಬ್ಬ ಸದಸ್ಯ ನಮ್ಮ ಸಂಘದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಶಾಸಕ ಶ್ರೀವತ್ಸ ಹೇಳಿದರು.
ಡಿಕೆ ಶಿವ ಕುಮಾರ್ ಜೊತೆ ಶಾಸಕರು ಇಲ್ಲ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸಂಪ್ರದಾಯವು ಅದೇ. ಹೈ ಕಮಾಂಡ್ ನಿಂದ ಚೀಟಿ ಬರತ್ತೆ . ಅವರು ಸಿಎಂ ಆಗ್ತಾರೆ. ಅದಕ್ಕಾಗಿ ಡಿಕೆ ಶಿವಕುಮಾರ್ ಕೂಡ ಎಲ್ಲವೂ ಹೈ ಕಮಾಂಡ್ ನಿರ್ಧಾರ ಅಂತ ಹೇಳೋದು. ನವೆಂಬರ್ ನಲ್ಲಿ ಕ್ರಾಂತಿ ಆಗತ್ತೆ ನೋಡುತ್ತೀರಿ ಎಂದರು.
Key words: RSS, dress, Myosre, MLA, srivatsta