ತಾಕತ್ತಿದ್ದರೇ ಗ್ಯಾರಂಟಿ ಪಡೆಯಬೇಡಿ ಎಂದು ಬಿಜೆಪಿ ಹೇಳಲಿ ನೋಡೋಣ- ಶಾಸಕ ಶಿವಲಿಂಗೇಗೌಡ ಸವಾಲು

ದಾವಣಗೆರೆ,ಏಪ್ರಿಲ್,7,2026 (www.justkannada.in): ಗ್ಯಾರಂಟಿಯಿಂದ ಸರ್ಕಾರ ದಾರಿ ತಪ್ಪಿದೆ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ತಾಕತ್ತಿದ್ದರೇ ಗ್ಯಾರಂಟಿ ಪಡೆಯಬೇಡಿ ಎಂದು ಬಿಜೆಪಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ, ಈ ಉಪಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.  ಗ್ಯರಂಟಿ ವೈಯಕ್ತಿಕ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ. ಬಿಜೆಪಿಗೆ ತಾಕತ್ತಿದ್ದರೆ ಗ್ಯಾರಂಟಿ ಪಡೆಯಬೇಡಿ ಎಂದು ಹೇಳಿ ನೋಡೋಣ ಎಂದರು.

ಸುಳ್ಳು ಪ್ರಚಾರ ಮಾಡುವ ಬಿಜೆಪಿಯರಿಗೆ ಮಾನ ಮರ್ಯದೆ ಇದೆಯಾ ಶಾಸಕರಿಗೆ ನೀಡುವ ಅನುದಾನ ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

Key words: BJP, guarantee, strength, MLA, Shivalingegowda