ಮಂಡ್ಯ,ಫೆಬ್ರವರಿ,18,2026 (www.justkannada.in): ಸಚಿವ ಹೆಚ್ ಸಿ ಮಹದೇವಪ್ಪ ಅವರ ಬೀದಿನಾಯಿ ಹೇಳಿಕೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ರವಿ ಗಣಿಗ, ಡಿಕೆ ಶಿವಕುಮಾರ್ ಅಂದ್ರೆ ನಿಯತ್ತಿನ ಸೈನಿಕ ಹೈಕಮಾಂಡ್ ಗೆ ನಿಯತ್ತಿನಲ್ಲಿರೋ ಮನುಷ್ಯ. ಡಿಕೆ ಶಿವಕುಮಾರ್ ಅಂದರೆ ಕಾಂಗ್ರೆಸ್ ಪಕ್ಷದ ನಿಯತ್ತು ಅದಕ್ಕೆ ಹೆಚ್.ಸಿ ಮಹದೇವಪ್ಪ ಹೇಳುತ್ತಿರಬಹುದು ಎಂದು ಟಾಂಗ್ ಕೊಟ್ಟರು.
ಒಂದು ವಾರದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ನಾಯಿ ವ್ಯಂಗ್ಯ ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ಸಿಎಂ ಸೇರಿ 136 ಶಾಸಕರುಗಳು ಡಿಕೆಶೀ ಆಪ್ತರೆ ಎಂದು ಶಾಸಕ ರವಿಗಣಿಗ ತಿಳಿಸಿದರು.
Key words: DK Shivakumar, soldier, faith, MLA Ravi ganiga







